ನೆಲ್ಯಾಡಿ: ಶ್ರೀ ವನದುರ್ಗಾ ಕೃಪಾಶ್ರಿತ ಸಂಚಾರಿ ನಡುಮನೆ ಯಕ್ಷಗಾನ, ಶಿಶಿಲ ಇವರಿಂದ ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟು, ಪರಾರಿ ಪ್ರದೇಶದಲ್ಲಿ ಮನೆ ಮನೆಗೆ ತೆರಲಿ ಯಕ್ಷಗಾನ ಪ್ರದರ್ಶನ ನೀಡಲಾಯಿತು.
ಜಯಾನಂದ ಬಂಟ್ರಿಯಾಲ್, ಜಿನ್ನಪ್ಪ ಶೆಟ್ಟಿ, ಸದಾನಂದ ಶೆಟ್ಟಿ, ರತ್ನಾಕರ ಬಂಟ್ರಿಯಾಲ್, ದಯಾಕರ ರೈ, ಜಯರಾಮ ಶೆಟ್ಟಿ ಗೌರಿಜಾಲು, ತುಕರಾಮ ಶೆಟ್ಟಿ ಹೊಸಮನೆ, ಚೆನ್ನಪ್ಪ ಗೌಡ ಹೊಸಮನೆ, ಪುಷ್ಪರಾಜ್ ಶೆಟ್ಟಿ ಪರಾರಿಯವರ ಮನೆಯಲ್ಲಿ ಯಕ್ಷಗಾನ ಪ್ರದರ್ಶನ ನೀಡಲಾಯಿತು. ಸಂಚಾರಿ ಮೇಳದಲ್ಲಿ ಭಾಗವತರಾಗಿ ಕಟೀಲು ಮೇಳದ ಮೋಹನ ಶಿಶಿಲ, ಮೃದಂಗದಲ್ಲಿ ಸಸಿಹಿತ್ಲು ಮೇಳದ ಆನಂದ ಪಡ್ರೆ, ಚೆಂಡೆಯಲ್ಲಿ ಕಟೀಲು ಮೇಳದ ವಿಶ್ವನಾಥ ಶೆಣೈ, ಪಾತ್ರದಾರಿಗಳಾಗಿ ಕಟೀಲು ಮೇಳದ ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಅಮೃತೇಶ್ವರೀ ಮೇಳದ ರಾಘವೇಂದ್ರ ಪೇತ್ರಿ ಭಾಗವಹಿಸಿದ್ದರು. ಕಟೀಲು ಮೇಳದ ಕೇಶವ ನಾಯಕ್ ಸಹಕರಿಸಿದರು.