ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ಒಕ್ಕೂಟದ ಆಶ್ರಯದಲ್ಲಿ ರಚನೆಗೊಂಡ ಸೌಭಾಗ್ಯ ಸ್ವಸಹಾಯ ಸಂಘ ಕೊಲ್ಯೊಟ್ಟು ಇದರ ಉದ್ಘಾಟನೆ ಜು.7ರಂದು ಕೊಲ್ಯೊಟ್ಟು ಜಾರ್ಜ್ರವರ ಮನೆಯಲ್ಲಿ ನಡೆಯಿತು.
ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ರವರು ಉದ್ಘಾಟಿಸಿದರು. ಮೇಲ್ವಿಚಾರಕ ವಿಜೇಶ್ ಜೈನ್ರವರು ಮಾಹಿತಿ ನೀಡಿದರು. ಸಂಘದ ಅಧ್ಯಕ್ಷೆ ಸುಧಾ, ಕಾರ್ಯದರ್ಶಿ ಬಿಷಾ, ಕೋಶಾಧಿಕಾರಿ ಶೃತಿ, ಸದಸ್ಯರಾದ ಕಮಲ, ಗೀತಾ, ರೇಖಾ, ನೆಲ್ಯಾಡಿ ಒಕ್ಕೂಟದ ಕಾರ್ಯದರ್ಶಿ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಹೇಮಾವತಿ ಜೆ.,ನಿರೂಪಿಸಿದರು.