ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ದರ್ಬೆ ವಿನಾಯಕ ನಗರದಲ್ಲಿ ವರ್ಷಂಪ್ರತಿ ಜರಗಲಿರುವ ಎರಡು ದಿನಗಳ 40ನೇ ವರ್ಷದ ಶ್ರೀ ಗಣೇಶೋತ್ಸವದ ವಿಗ್ರಹ ಮುಹೂರ್ತಕ್ಕೆ ಚಾಲನೆ ಜು.8 ರಂದು ಪರ್ಲಡ್ಕದಲ್ಲಿ ನೆರವೇರಿತು.
ವಿಗ್ರಹ ರಚನೆಕಾರ ತಾರಾನಾಥ ಆಚಾರ್ಯರವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ಕಾರ್ಯಗಳನ್ನು ನಡೆಸುವುದರ ಮೂಲಕ ವಿಗ್ರಹ ಮುಹೂರ್ತವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಸದಸ್ಯರಾದ ನಾಗೇಶ್ ಪೈ, ಕೀರ್ತೇಶ್, ಸುಹಾನ್, ರೋಹಿತ್, ಆಶ್ಲೇಶ್, ಸುಕುಮಾರ, ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಜ್ವಲ್ ಪಿ, ಉಪಾಧ್ಯಕ್ಷ ಅಮೃತ್ ರೈ, ಕಾರ್ಯದರ್ಶಿ ಪ್ರಖ್ಯಾತ್ ಟಿ.ಜೆ, ಜೊತೆ ಕಾರ್ಯದರ್ಶಿ ಸಾಯಿಲಿ ವಿ.ಸುವರ್ಣ, ಸದಸ್ಯರಾದ ವಿಕ್ರಂ, ಹೃದಯ್, ನಮಿತ, ಕೃತಿಕಾ, ರಶ್ಮಿ, ಧನುಷ್, ಧನುಷ್ ವೈ.ಕೆ, ವೀಕ್ಷಿತಾ, ಅನುಷ್, ಅಕ್ಷತಾ, ಶರಣ್ಯ, ಅಭಿಷೇಕ್ ಯಾದವ್, ಅಭಿಷೇಕ್ ಸಿ, ಶ್ರೀಪ್ರಿಯಾ, ಕೀರ್ತಿಕಾ, ಚೈತನ್ಯ, ಪ್ರಖ್ಯಾತ್ ರೈ, ಪ್ರೀತಂ, ಶ್ರೇಯಸ್, ಕಿರಣ್, ಚೇತನ್, ಸಾತ್ವಿಕ್, ಅಧೀಶ್, ದ್ರುಪದ್, ಆಯುಷ್ ರೈ, ನಿತಿನ್ ಮುಂತಾದವರು ಉಪಸ್ಥಿತರಿದ್ದರು.