ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಅಜಲಾಡಿ ಅಂಗನವಾಡಿ ಕೇಂದ್ರದಲ್ಲಿ ಸನ್ಮಾನ

0

ಪುತ್ತೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಕುರಿಯ ಗ್ರಾಮದ ಅಜಲಾಡಿ ಅಂಗನವಾಡಿ ಕೇಂದ್ರದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಕಾರ್ಯಕ್ರಮ ಉದ್ಘಾಟಿಸಿದರು.

 


ಅಜಲಾಡಿ ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮೀತಿಯ ಅಧ್ಯಕ್ಷೆ ಮೋಹಿನಿ ಅಧ್ಯಕ್ಷತೆ ವಹಿಸಿದ್ದರು. 2021/22 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಆಶಿಕ.ಕೆ, ಗೌರವ್ ಆರ್.ಕೆ, ಫಾತಿಮತ್ ಬುಶ್ರಾ, ವಿದ್ಯಾಶ್ರೀ ರೈ, ಹಾಗೂ ವಿಕಲಚೇತನ ಮಗು ಗೌಶಿಕ್ ರೈಯವರನ್ನು ಸನ್ಮಾನಿಸಲಾಯಿತು.

ಆರ್ಯಾಪು ಗ್ರಾ.ಪಂ ಕಾರ್ಯದರ್ಶಿ ನಾಗೇಶ್, ಯುವ ಉದ್ಯಮಿ ಶಿವರಾಮ ಆಳ್ವ, ಆರ್ಯಾಪು ಗ್ರಾ.ಪಂ ಸದಸ್ಯರಾದ ಬೂಡಿಯಾರ್ ಪುರುಷೋತ್ತಮ ರೈ, ನಾಗೇಶ್ ಕುರಿಯ, ಯಾಕೂಬ್ ಕುರಿಯ, ಕಲಾವತಿ ಮಲಾರ್, ಕುರಿಯ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಎಂ.ಎಸ್, ಹಳೆ ವಿದ್ಯಾರ್ಥಿ ಅಶ್ರಫ್ ಕುರಿಯ, ಕುರಿಯ ಶಾಲಾ ಶಿಕ್ಷಕರಾದ ಜಗದಿಶ್ ಹಾಗೂ ನವಿನ್ ಸರ್, ಅಂಗನವಾಡಿ ಸಹಾಯಕಿಯರ ಸಂಘದ ತಾಲೂಕು ಅಧ್ಯಕ್ಷೆ ಕಮಲ, ಅಬ್ದುಲ್ ಕುಂಞಿ ಕುರಿಯ, ಮೀಡಿಯಾ ಒನ್ ಕನ್ನಡ ಚಾನೆಲ್‌ನ ವರದಿಗಾರ ಸಮೀರ್ ಶಾಝ್ ಉಪಸ್ಥಿತರಿದ್ದರು.

ಶೋಭಾವತಿ ಯು ರೈ ಪ್ರಾರ್ಥಿಸಿದರು. ಪೂರ್ಣಿಮಾ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಶೋಭಾ ವಂದಿಸಿದರು. ಸುನಿತಾ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here