ವಿಟ್ಲ: ಸಾಲೆತ್ತೂರು – ವಿಟ್ಲ ರಸ್ತೆಯ ಕರೈ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ 800ಕಾರು ರಸ್ತೆ ಬದಿಯ ಚರಂಡಿಗೆ ಜಿಗಿದು ಪಕ್ಕದ ಮನೆಯ ಆವರಣ ಗೋಡೆಗೆ ಅಪ್ಪಳಿಸಿದ ಘಟನೆ ನಡೆದಿದೆ.
ಅಪಘಾತದಿಂದಾಗಿ ಕಾರು ಚಾಲಕ ಕುದ್ರಿಯ ನಿವಾಸಿ ದಿವ್ಯೇಶ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದ ವೇಳೆ ಚಾಲಕ ಕಾರಿನಿಂದ ಹೊರಕ್ಕೆಸೆಯಲ್ಪಟ್ಟಿದ್ದಾರೆ. ಕಾರು ಸಂಪೂರ್ಣ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.