- ಬಕ್ರೀದ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ- ಅಬ್ದುಲ್ ಸಲಾಂ ಫೈಝಿ
ಪುತ್ತೂರು: ಅಮ್ಚಿನಡ್ಕ ಜಮಾ ಮಸೀದಿಯಲ್ಲಿ ಈದುಲ್ ಅದ್ಹಾ ಪ್ರಯುಕ್ತ ಸ್ಥಳೀಯ ಖತೀಬ್ ಅಬ್ದುಲ್ ಸಲಾಂ ಪೈಝಿ ನೇತೃತ್ವದಲ್ಲಿ ವಿಶೇಷ ನಮಾಜ್ ನಡೆಯಿತು.
ಬಳಿಕ ಸಂದೇಶ ಭಾಷಣ ಮಾಡಿದ ಅವರು ದ್ವೇಷದಿಂದ ಏನೂ ಸಾಧಿಸಲು ಸಾಧ್ಯವಿಲ್ಲ, ಪ್ರೀತಿಸಿ ನೋಡಿ ಮರಣದ ನಂತರವೂ ಜನ ನಿಮ್ಮನ್ನು ನೆನಪಿಸುತ್ತಾರೆ.
ಹಬ್ಬದ ಹೆಸರಿನಲ್ಲಿ ಅನಗತ್ಯ ತಿರುಗಾಟ ನಡೆಸದೆ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕರೆ ನೀಡಿದರು. ಜಮಾತರು ಉಪಸ್ಥಿತರಿದ್ದರು