ಕಾಣಿಯೂರು: ಕಾಣಿಯೂರಿನ ಬೈತಡ್ಕದಲ್ಲಿ ಹೊಳೆಗೆ ಬಿದ್ದ ಕಾರು ಪತ್ತೆಯಾಗಿದ್ದು ಅಗ್ನಿಶಾಮಕ ದಳ, ಮುಳುಗುತಜ್ಞರು ಹಾಗೂ ಸ್ಥಳಿಯರ ಕಾರ್ಯಾಚರಣೆಯಿಂದ ಕಾರನ್ನು ಮೇಲಕ್ಕೆತ್ತಲಾಯಿತು.
ಜು.೯ರಂದು ಪುತ್ತೂರು ಕಡೆಯಿಂದ ಹೋಗುತ್ತಿದ್ದ ಕಾರು ರಾತ್ರಿ ಹೊಳೆಗೆ ಬಿದ್ದಿತ್ತು. ಕಾರು ಬಿದ್ದ ದೃಶ್ಯ ಹತ್ತಿರದ ಮಸೀದಿಯ ಸಿಸಿಟಿಯಲ್ಲಿ ಸೆರೆಯಾಗಿತ್ತು. ಕಾರಿನಲ್ಲಿ ವಿಟ್ಲ ಕುಂಡಡ್ಕದ ಧನುಷ್ ಹಾಗೂ ಮಂಜೇಶ್ವರದ ಧನುಷ್ ಎಂಬವರು ಪ್ರಯಾಣಿಸುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಆದರೆ ಇಬ್ಬರೂ ಪ್ರಯಾಣಿಕರು ಕಣ್ಮರೆಯಾಗಿದ್ದಾರೆ ಎಂದು ತಿಳಿದು ಬಂದಿದೆ.