- ಅಧ್ಯಕ್ಷ; ನವೀನ್ ಕೊಪ್ಪ, ಕಾರ್ಯದರ್ಶಿ; ಮೋಹನ್ ಕಟ್ಟೆಮಜಲು
ನೆಲ್ಯಾಡಿ: ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಜು.8ರಂದು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀ ಶಬರೀಶ ಸಭಾಭವನದಲ್ಲಿ ನಡೆದ ಸಭೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ನವೀನ್ ಕೊಪ್ಪ, ಕಾರ್ಯದರ್ಶಿಯಾಗಿ ಮೋಹನ್ ಕಟ್ಟೆಮಜಲು, ಉಪಾಧ್ಯಕ್ಷರಾಗಿ ಕೃಷ್ಣಪ್ಪ ನಿಡ್ಡೋಡಿ, ಕೋಶಾಧಿಕಾರಿಯಾಗಿ ದಯಾನಂದ ಆದರ್ಶ, ಜೊತೆ ಕಾರ್ಯದರ್ಶಿ ರಕ್ಷಿತ್ ಮಡಿವಾಳ ಆಯ್ಕೆಗೊಂಡರು. ಸಮಿತಿ ಸದಸ್ಯರಾಗಿ ಡಾ.ಸದಾನಂದ ಕುಂದರ್, ಸುಧೀರ್ ಕುಮಾರ್ ಕೆ.ಎಸ್, ಉದಯಕುಮಾರ್ ಗೌಡ, ರವಿಪ್ರಸಾದ್ ಶೆಟ್ಟಿ, ಚಂದ್ರಶೇಖರ್ ಬಾಣಜಾಲು, ರಾಕೇಶ್ ಎಸ್., ಪ್ರಹ್ಲಾದ್ ಶೆಟ್ಟಿ, ಉಮೇಶ್ ಪೂಜಾರಿ, ರಘುನಾಥ, ಸುರೇಶ್ ಪಡಿಪಂಡ, ಅನಿಲ್ ರೈ, ವಿನೋದ್ ಕುಮಾರ್, ಮೋಹನ್ ಶಿಶಿಲ, ಮಂಜುನಾಥ ಗೌಡ, ವಿನಯ್ ಕಟ್ಟೆಮಜಲು, ಹರೀಶ್ ಕಟ್ಟೆಮಜಲು ಆಯ್ಕೆಗೊಂಡರು. ೩೯ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಉಮೇಶ್ ಪೂಜಾರಿ ಪೊಸಳಿಗೆ ಅಧ್ಯಕ್ಷತೆ ವಹಿಸಿದ್ದರು. ದೇವಳದ ಅಧ್ಯಕ್ಷ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ರಾಕೇಶ್ ಎಸ್., ಮತ್ತಿತರರು ಉಪಸ್ಥಿತರಿದ್ದರು.