ಬೈತಡ್ಕದಲ್ಲಿ ಹೊಳೆಗೆ ಬಿದ್ದ ಕಾರು : ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರಿಗಾಗಿ ಶೋಧ

0

ಕಾಣಿಯೂರು: ಕಾಣಿಯೂರಿನ ಬೈತಡ್ಕದಲ್ಲಿ ಹೊಳೆಗೆ ಬಿದ್ದ ಕಾರು ಪತ್ತೆಯಾಗಿ ಕಾರನ್ನು ಮೇಲಕ್ಕೆತ್ತಲಾಗಿದ್ದು ಕಾರಲ್ಲಿ ಪ್ರಯಾಣಿಸುತ್ತಿದ್ದರೆನ್ನಲಾದ ಇಬ್ಬರು ಯುವಕರ ಪತ್ತೆಗಾಗಿ ಶೊಧ ಕಾರ್ಯ ಮುಂದುವರೆದಿದೆ. ಅಗ್ನಿಶಾಮಕ ದಳ, ಮುಳುಗುತಜ್ಞರು ಹಾಗೂ ಸ್ಥಳೀಯರು ನಾಪತ್ತೆಯಾದ ಯುವಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಜು.9ರಂದು ತಡರಾತ್ರಿ ಪುತ್ತೂರು ಕಡೆಯಿಂದ ಹೋಗುತ್ತಿದ್ದ ಕಾರು ರಾತ್ರಿ ಹೊಳೆಗೆ ಬಿದ್ದಿತ್ತು. ಕಾರು ಬಿದ್ದ ದೃಶ್ಯ ಹತ್ತಿರದ ಮಸೀದಿಯ ಸಿಸಿಟಿಯಲ್ಲಿ ಸೆರೆಯಾಗಿತ್ತು. ಕಾರಿನಲ್ಲಿ ವಿಟ್ಲದ ಯುವಕರಾದ ಧನುಷ್ ಎಂಬ ಹೆಸರಿನ ಇಬ್ಬರು ಯುವಕರು ಗುತ್ತಿಗಾರು ಕಡೆಗೆ ಪ್ರಯಾಣಸುತ್ತಿದ್ದರು. ಬಳಿಕ ಕಾರು ಪತ್ತೆಯಾಗಿ ಕಾರನ್ನು ಮೇಲಕ್ಕೆತ್ತಲಾಗಿದ್ದು ಯುವಕರು ನಾಪತ್ತೆಯಾಗಿದ್ದರು. ಇದೀಗ ನಾಪತ್ತೆಯಾದ ಯುವಕರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಬಳಕೆಯಾಗುತ್ತಿರುವ ಮೊಬೈಲ್ ನಂಬರ್ : ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕುತ್ತಿದ್ದು ಕಾರು ಹೊಳೆಗೆ ಬಿದ್ದ ಬಳಿಕವೂ ಯುವಕರ ಮೊಬೈಲ್ ಫೋನ್ ಬಳಕೆಯಾಗುತ್ತಿರುವುದು ಪತ್ತೆಯಾಗಿದೆ. ಆದರೆ ಹೊಳೆಯಿಡೀ ಹುಡುಕಾಡಿದರೂ ಯುವಕರ ಪತ್ತೆಯಿಲ್ಲ. ಹೊಳೆಗೆ ಬಿದ್ದ ಬಳಿಕ ತಮ್ಮ ಕಾರಿಗೆ ಲಾರಿ ಢಿಕ್ಕಿ ಹೊಡೆದಿದೆ ಎಂದು ಯುವಕರು ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಇದೇ ನಂಬರ್‌ನ್ನು ಪೊಲೀಸರು ಟ್ರೇಸ್ ಮಾಡಿ ಲೊಕೇಶನ್ ಪತ್ತೆ ಹಚ್ಚಲು ಯತ್ನಿಸುತ್ತಿದ್ದು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here