ನಿಡ್ಪಳ್ಳಿ; ಸಾಮೂಹಿಕ ಶ್ರೀ ವರ ಮಹಾಲಕ್ಷ್ಮೀ ವೃತ ಪೂಜೆಯು ಆ. 5 ರಂದು ಬೆಟ್ಟಂಪಾಡಿ ದೇವಾಲಯದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಜು.10 ರಂದು ದೇವಾಲಯದಲ್ಲಿ ನಡೆಯಿತು.
ದೇವಾಲಯದ ಪ್ರಧಾನ ಅರ್ಚಕ ದಿವಾಕರ ಭಟ್, ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಬೀಡು, ಪೂಜಾ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ ಕಕ್ಕೂರು, ವೆಂಕಟ್ರಮಣ ಭಟ್. ಬಿ, ಯೋಜನೆಯ ವಲಯ ಮೆಲ್ವೀಚಾರಕ ಶಿವಪ್ಪ. ಎಂ, ಪೂಜಾ ಸಮಿತಿಯ ಅಧ್ಯಕ್ಷೆ ಪ್ರೇಮಲತಾಜ ಜೆ.ರೈ ಆನಡ್ಕ, ಸುಮನ ಎಸ್ ಬಲ್ಲಾಳ್, ಲಕ್ಷ್ಮೀನಾರಾಯಣ ರೈ ನುಳಿಯಾಲು, ರವಿನಾಥ ಕೋನಡ್ಕ, ಸವಿತಾ ಚಂದ್ರನ್ ತಲೆಪ್ಪಾಡಿ, ಬಾಲಕೃಷ್ಣ ನಾಯ್ಕ.ಡಿ, ಶಂಕರ ಗುಂಡ್ಯಡ್ಕ, ಸೇವಾ ಪ್ರತಿನಿಧಿ ಪದ್ಮಾವತಿ. ಡಿ, ದಯಾನಂದ, ಅಕ್ಕು ಮತ್ತೀತರರು ಉಪಸ್ಥಿತರಿದ್ದರು.