ಪುತ್ತೂರು: ಕೊಂಬೆಟ್ಟು ತಾಲೂಕು ಕ್ರೀಡಾಂಗಣದ ಧರೆ ಕುಸಿತಗೊಳ್ಳುತ್ತಿದ್ದು, ಪಕ್ಕದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣಗೋಡೆ ಕುಸಿಯು ಭೀತಿಯಲ್ಲಿದೆ.
ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಶಾಲಾ ಭಾಗದಲ್ಲಿ ಧರೆ ಕುಸಿತಗೊಂಡು ಧರೆ ಗೋಲಾಕಾರವಾಗಿದೆ. ಮತ್ತೊಂದು ಕಡೆ ಧರೆಯ ಮೇಲ್ಭಾಗದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಶಾಲಾ ಆವರಣಗೋಡೆ ವಾಲಿದು ಕುಸಿಯುತ ಭೀತಿಯಲ್ಲಿದೆ. ಸುಮಾರು ೨ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಹೊಂದಿರುವ ಪುತ್ತೂರು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ಮುನ್ನೆಚ್ಚರಿಕಾ ಟೇಪ್ ಕಟ್ಟಲಾಗಿದೆ. ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರಸಭಾ ಸ್ಥಳೀಯ ಸದಸ್ಯರೂ ಮತ್ತು ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಭೇಟಿ ನೀಡಿದ್ದಾರೆ. ಸಂಸ್ಥೆಯ ಪ್ರಾಂಶುಪಾಲ ಸುರೇಶ್ ಭಟ್, ಉಪಪ್ರಾಂಶಪಾಲ ವಸಂತ್ ಮೂಲ್ಯ ಅವರು ಆವರಣಗೋಡೆ ವಾಲಿದ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.