ಕೋಡಿಂಬಾಡಿ: ರೈತ ಸಂಘ, ಹಸಿರು ಸೇನೆಯ ಪದಾಧಿಕಾರಿಗಳ ಪದಗ್ರಹಣ

0

ಪುತ್ತೂರು: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ದ.ಕ.ಜಿಲ್ಲಾ ಘಟಕ(ಸಾಮೂಹಿಕ ನಾಯಕತ್ವದಲ್ಲಿ)ದ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮ ಘಟಕಗಳ ರೈತರ ಸಮಾಲೋಚನಾ ಸಭೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕೋಡಿಂಬಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.


ರೈತಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಎರಡೂ ಗ್ರಾಮ ಘಟಕದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ದ.ಕ ಜಿಲ್ಲಾ ಘಟಕದ ಗೌರವಾಧ್ಯಕ್ಷ ಹರ್ಷಕುಮಾರ್ ಹೆಗ್ಡೆ ಪಚ್ಚಾಡಿರವರು ಸಂಘದ ಧ್ವಜ ನೀಡಿ, ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ ಜವಾಬ್ದಾರಿಯ ಹಸಿರು ಶಾಲು, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಪುಚ್ಚತಡ್ಕರವರು ಸಂಘದ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಪದಗ್ರಹಣ ನೆರವೇರಿಸಿದರು.

ಸಂಘದ ಜಿಲ್ಲಾ ಮುಖಂಡ ಮುರಳೀಧರ ರೈ ಮಠಂತಬೆಟ್ಟು ಪ್ರಾಸ್ತಾವಿಕವಾಗಿ ಮಾತಾನಾಡಿದರು. ಕೋಡಿಂಬಾಡಿ ಘಟಕದ ಗೌರವಾಧ್ಯಕ್ಷರಾದ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಹುಸೈನ್ ಕೆ.ಬಿ.ಕೆ. ಕೋಡಿಂಬಾಡಿ, ಅಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಗೌರವ ಸಲಹೆಗಾರರಾದ ಅಶೋಕ್ ಕುಮಾರ್ ರೈ ಕೆ.ಯಸ್, ವಿಕ್ರಮ್ ಶೆಟ್ಟಿ ಅಂತರ, ಪದ್ಮನಾಭ ಆಚಾರ್ಯ ಪರನೀರು, ಪ್ರಧಾನ ಕಾರ್ಯದರ್ಶಿ ಕುಮಾರನಾಥ ಎಸ್.ಪಲ್ಲತ್ತಾರು, ಉಪಾಧ್ಯಕ್ಷ ಜಗನ್ನಾಥ ಶೆಟ್ಟಿ ನಡುಮನೆ, ಕಾರ್ಯದರ್ಶಿಗಳಾದ ಯೋಗೀಶ್ ಎಸ್.ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಯತೀಶ್ ಶೆಟ್ಟಿ ಬರಮೇಲು, ಕೋಶಾಧಿಕಾರಿ ವಾರಿಸೇನ ಜೈನ್ ಕೋಡಿಯಾಡಿ, ಬೆಳ್ಳಿಪ್ಪಾಡಿ ಘಟಕದ ಗೌರವಾಧ್ಯಕ್ಷ ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಅಧ್ಯಕ್ಷ ಮಾರ್ಷಲ್ ವೇಗಸ್, ಗೌರವ ಸಲಹೆಗಾರರಾದ ಪದ್ಮನಾಭ ಶೆಟ್ಟಿ ರೆಂಜಾಜೆಗುತ್ತು, ದುಗ್ಗಪ್ಪ ಗೌಡ ದೇವಸ್ಯ, ಮೋನಪ್ಪ ಗೌಡ ಪಮ್ಮನಮಜಲು, ಪ್ರಧಾನ ಕಾರ್ಯದರ್ಶಿ ವಸಂತ ಕುಂಡಾಪು, ಉಪಾಧ್ಯಕ್ಷರಾದ ಸುಬ್ಬಣ್ಣ ಶೆಟ್ಟಿ ರೆಂಜಾಜೆಗುತ್ತು, ಕಾರ್ಯದರ್ಶಿ ವಾಸು ಆಚಾರ್ಯ ಕೊಡಪಟ್ಯ ಮತ್ತು ಕೋಶಾಧಿಕಾರಿ ಸಿಲ್ವೆಸ್ಟರ್ ವೇಗಸ್, ಕೋಡಿಂಬಾಡಿ ಗ್ರಾಮದ ಮಹಿಳಾ ಘಟಕದ ಅಧ್ಯಕ್ಷೆ ಯಮುನಾ ಡೆಕ್ಕಾಜೆ, ಕಾರ್ಯದರ್ಶಿ ಪೂರ್ಣಿಮಾ ಯತೀಶ್ ಶೆಟ್ಟಿ, ಪದಾಧಿಕಾರಿಗಳಾದ ಹರಿಣಾಕ್ಷಿ ಶೇಖರ ಪೂಜಾರಿ ಡೆಕ್ಕಾಜೆ, ಪೂರ್ಣಿಮಾ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ವೇದಾವತಿ ಎಸ್.ರೈ ಕೋಡಿಂಬಾಡಿ, ಹರಿಣಾಕ್ಷಿ ರಮೇಶ್ ಭಂಡಾರಿ ಕೈಪರವರ ನೇತೃತ್ವದ ತಂಡ ಪದಗ್ರಹಣದಲ್ಲಿ ಭಾಗಿಯಾಗಿತ್ತು. ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಮದ ಹಲವು ರೈತರನ್ನು ಸಂಘದ ಸದಸ್ಯರಾಗಿ ನೋಂದಾವಣೆ ಮಾಡಲಾಯಿತು.

LEAVE A REPLY

Please enter your comment!
Please enter your name here