ಪುತ್ತೂರು; ಕುಂಬ್ರ- ಬೆಳ್ಳಾರೆ ರಸ್ತೆಯ ಸಾರೆಪುಣಿ ಬಸ್ ನಿಲ್ದಾಣದ ಬಳಿ ಗುಡ್ಡವೊಂದು ಮಳೆಗೆ ಕುಸಿದು ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆಗೆ ಭಾರೀ ಪ್ರಮಾಣದಲ್ಲಿ ಮಣ್ಣು ಬಿದ್ದಿತ್ತು. ಕುಂಬ್ರ ವಲಯ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದ ಸದಸ್ಯರು ರಸ್ತೆಗೆ ಬಿದ್ದ ಮಣ್ಣನ್ನು ತೆರವು ಮಾಡಿದ್ದಾರೆ. ವಿಖಾಯ ಸದಸ್ಯರಾದ ಅಶ್ರಫ್ ಸಾರೆಪುಣಿ, ಇಕ್ಬಾಲ್ ಸಾರೆಪುಣಿ, ರಫೀಕ್ ಸಾರೆಪುಣಿ, ಆಸಿಫ್ ಸಾರೆಪುಣಿ ಮತ್ತು ಉಸ್ಮಾನ್ ಸಾರೆಪುಣಿ ಮಣ್ಣು ತೆರವುಗೊಳಿಸುವ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ಥಳಕ್ಕೆ ಭೇಟಿ ನೀಡಿದ ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ರೈ ಕುಂಬ್ರ ವಿಖಾಯ ಕಾರ್ಯಕರ್ತರನ್ನು ಅಭಿನಂಧಿಸಿದರು.