ಕಾಣಿಯೂರು ಬೈತಡ್ಕ: ಕಾರು ಹೊಳೆಗೆ ಬಿದ್ದು ಯುವಕರಿಬ್ಬರ ಕಣ್ಮರೆ ಹಿನ್ನಲೆ- ಸಚಿವ ಎಸ್ ಅಂಗಾರ ಭೇಟಿ

0

ಕಾಣಿಯೂರು: ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಮಸೀದಿಯ ಬಳಿಯಿರುವ ಸೇತುವೆಯಿಂದ ಕಾರೊಂದು ಹೊಳೆಗೆ ಬಿದ್ದು ಯುವಕರಿಬ್ಬರು ಕಣ್ಮರೆಯಾಗಿರುವ ಹಿನ್ನಲೆಯಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಸ್ಥಳಕ್ಕೆ ಸಚಿವ ಎಸ್ ಅಂಗಾರ ಜು 11ರಂದು ಭೇಟಿ ನೀಡಿದ್ದಾರೆ.

ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಕಡಬ ತಹಶಿಲ್ದಾರ್ ಅನಂತಶಂಕರ್, ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ, ಬೆಳ್ಳಾರೆ ಠಾಣಾಧಿಕಾರಿ ರುಕ್ಮ ನಾಯ್ಕ್, ಸವಣೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಬೆಳಂದೂರು ಗ್ರಾ. ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿ ಕಟ್ಟ, ಸದಸ್ಯರಾದ ಮೋಹನ್ ಅಗಳಿ, ಉಮೇಶ್ವರಿ ಅಗಳಿ, ಪಿಡಿಓ ನಾರಾಯಣ, ಬೆಳಂದೂರು ಗ್ರಾಮಕರಣಿಕ ಪುಷ್ಪರಾಜ್ ಮೊದಲಾದವರು ಇದ್ದರು.

LEAVE A REPLY

Please enter your comment!
Please enter your name here