ಪುತ್ತೂರು: ಇತ್ತೀಚೆಗೆ ನಿಧನರಾದ ಬಿಜೆಪಿಯ ಹಿರಿಯ ಕಾರ್ಯಕರ್ತರಿಗೆ ಬೊಳುವಾರು ವಾರ್ಡ್-15ರ ಬಿಜೆಪಿ ಸಮಿತಿ ಹಾಗೂ ನಗರಸಭಾ ಸದಸ್ಯ ಸಂತೋಷ್ ಬೊಳುವಾರು ಅವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ನಿಧನರಾದ ಕಾರ್ಯಕರ್ತರುಗಳಾದ ಕೃಷ್ಣ ಪ್ರಸಾದ್ ಸಿ.ಕೆ, ರಾಮಚಂದ್ರ ಗೌಡ ಹಾಗೂ ಶಿವಾಜಿ ಪ್ರಭು ಇವರುಗಳಿಗೆ ಬೊಳುವಾರು ನವನೀತ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಮತ್ತು ನಗರ ಸಭೆಯ ಅಧ್ಯಕ್ಷರಾದ ಜೀವಂಧರ್ ಜೈನ್ ನುಡಿ ನಮನ ಸಲ್ಲಿಸಿದರು. ಸಭೆಯಲ್ಲಿ ವಿಭಾಗ ಸಹಪ್ರಭಾರಿಗಳಾದ ಗೋಪಾಲ ಕೃಷ್ಣಹೇರಳೆ, ನಗರ ಸಭೆಯ ಉಪಾಧ್ಯಕ್ಷರಾದ ವಿದ್ಯಾಗೌರಿ, ಜಿಲ್ಲಾ ಮಹಿಳಾ ಮೋರ್ಚಾದ ಕೋಶಾಧಿಕಾರಿಯಾದ ಪ್ರೇಮಲತಾ ರಾವ್, ಹಿರಿಯರಾದ ಲೋಕೇಶ್ ಹೆಗ್ಡೆ, ಮಹಾಶಕ್ತಿಕೇಂದ್ರದ ಪ್ರಮುಖರಾದ ಇಂದುಶೇಖರ್, ನೀಲಂತ್ ಕುಮಾರ್, ಬೂತ್ ಅಧ್ಯಕ್ಷರುಗಳಾದ ದಯಾಕರ ಹೆಗ್ಡೆ, ಪ್ರದೀಪ್ ಹೆಗ್ಡೆ, ವನಿತಾ ಕೆ.ಟಿ., ಹಿರಿಯರಾದ ರಂಗನನಾಥ್ ರಾವ್, ಪ್ರಭಾವತಿ, ಪ್ರವೀಣ್ ನಾಯಕ್, ರವಿ ಪೂಜಾರಿ, ದಯಾನಂದ ಕರ್ಮಲ, ರಾಜೇಶ್ ಕರ್ಮಲ, ದಯಾನಂದ, ರೋಹಿತ್, ರಾಜೇಶ್ವರಿ, ಸುಧಾಮ, ಮೋನಪ್ಪ, ಲೋಕೇಶ್ ಪೂಜಾರಿ, ಮೋಹನ್ ನಾಯ್ಕ ಮತ್ತಿತರರು ಶ್ರದ್ಧಾಂಜಲಿ ಸಲ್ಲಿಸಿ ಪುಷ್ಪಾರ್ಚನೆಗೈದರು. ಕಾರ್ಯ ಕ್ರಮವನ್ನು ಶಕ್ತಿಕೇಂದ್ರ ಪ್ರಮುಖರಾದ ನೀಲಂತ್ ಕುಮಾರ್ ನಿರೂಪಿಸಿದರು.