ಕುಂಬಾಡಿ: ಗುಡ್ಡ ಕುಸಿದು ನಿರ್ಮಾಣ ಹಂತದ ಮನೆ ಧ್ವಂಸ

0

ಪುತ್ತೂರು: ಭಾರೀ ಮಳೆಗೆ ಬನ್ನೂರು ಗ್ರಾ.ಪಂ. ವ್ಯಾಪ್ತಿಯ ಪಡ್ನೂರು ಗ್ರಾಮದ ಕುಂಬಾಡಿಯಲ್ಲಿ ಗುಡ್ಡ ಕುಸಿದು ನಿರ್ಮಾಣ ಹಂತದ ಮನೆಯೊಂದು ಸಂಪೂರ್ಣ ಧ್ವಂಸವಾದ ಘಟನೆ ಜು. 11ರಂದು ಬೆಳಿಗ್ಗೆ ನಡೆದಿದೆ.

ನೆಹರುನಗರ ನಿವಾಸಿ ರಾಮ್‌ ಭಟ್ ಎಂಬವರಿಗೆ ಸೇರಿದ ನಿರ್ಮಾಣ ಹಂತದ ಮನೆಯ ಮೇಲೆ ಗುಡ್ಡ ಕುಸಿತ ಉಂಟಾಗಿದೆ. ಘಟನೆಯಿಂದ ಮನೆ ಸಂಪೂರ್ಣ ಧ್ವಂಸವಾಗಿದ್ದು, ಪಕ್ಕದಲ್ಲಿರುವ ರಾಮ್‌ಭಟ್ ಸಹೋದರ ಈಶ್ವರ ಭಟ್ ಅವರ ಜಾಗದಲ್ಲೂ ಗುಡ್ಡ ಕುಸಿತವಾಗಿದೆ.

ರಸ್ತೆ ಪಕ್ಕದ ಮನೆಯವರಿಗೆ ಆತಂಕ:

ಗುಡ್ಡ ಕುಸಿದ ಜಾಗದ ಪಕ್ಕದಲ್ಲೊಂದು ಮನೆ ಮತ್ತು ರಸ್ತೆ ಕೆಳಗೊಂದು ಮನೆಯಿದ್ದು, ಮನೆಯಲ್ಲಿ ವಾಸ್ತವ್ಯ ಹೊಂದಿದವರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಮೂರು ದಿನಗಳಿಂದ ಹಂತ ಹಂತವಾಗಿ ಗುಡ್ಡದ ಮಣ್ಣು ಸಡಿಲಗೊಂಡು ಅಲ್ಲಲ್ಲಿ ಮಣ್ಣು ಬೀಳುತ್ತಿದ್ದು, ಜು. 11ರಂದು ಗುಡ್ಡದಿಂದ ಭಾರಿ ಗಾತ್ರದ ಕಲ್ಲು ಮಣ್ಣು ಸಮೇತ ಉರುಳಿದೆ. ಇದೀಗ ಸ್ಥಳೀಯ ಮನೆಯವರಿಗೆ ಆತಂಕವುಂಟಾಗಿದೆ. ಘಟನಾ ಸ್ಥಳಕ್ಕೆ ಗ್ರಾ.ಪಂ. ಸದಸ್ಯ ಶೀನಪ್ಪ ಕುಲಾಲ್ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ. ಅಽಕಾರಿಗಳು ಮಾತ್ರ ಈ ಕಡೆ ಬಂದಿಲ್ಲ ಎಂದು ಸ್ಥಳೀಯ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here