ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಪುತ್ತಿಲ ಶ್ರೀರಾಮ ಗೆಳೆಯರ ಬಳಗದಿಂದ ಶನೀಶ್ವರ ಪೂಜಾ ಪೂರ್ವಭಾವಿ ಸಭೆ-ಸಮಿತಿ ರಚನೆ

0

  • ಗೌರವಾಧ್ಯಕ್ಷ: ಅರುಣ್ ಪುತ್ತಿಲ, ಅಧ್ಯಕ್ಷ: ಅನಿಲ್ ಕಣ್ಣಾರ್ನೂಜಿ ಪ್ರ.ಕಾರ್ಯದರ್ಶಿ: ಬಾಲಚಂದ್ರ

ಪುತ್ತೂರು: ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇದರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಕಾರ್ಯಕ್ರಮ ಸೆ.10ರಂದು ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಡೆಯಲಿದ್ದು ಆ ಪ್ರಯುಕ್ತ ದೇವಳದಲ್ಲಿ ಪೂರ್ವಭಾವಿ ಸಭೆ ನಡೆಸಿ ಶನೀಶ್ವರ ಪೂಜಾ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾಗಿ ಅನಿಲ್ ಕಣ್ಣಾರ್ನೂಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಾಲಚಂದ್ರ ಕಡ್ಯ ಅವರನ್ನು ಆಯ್ಕೆ ಮಾಡಲಾಯಿತು.

ಜೊತೆ ಕಾರ್ಯದರ್ಶಿಗಳಾಗಿ ಚಂದ್ರಶೇಖರ್ ಕುರೆಮಜಲು ಹಾಗೂ ದಿನೇಶ್ ಬಿ.ಕೆ, ಕೋಶಾಧಿಕಾರಿಯಾಗಿ ಹರೀಶ್ ಬಿ.ಕೆ ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಭಾಸ್ಕರ ಆಚಾರ್ ಹಿಂದಾರು, ಜಯಂತ ನಡುಬೈಲು, ಸುಂದರ ಗೌಡ ನಡುಬೈಲು, ಶ್ರೀಕಾಂತ್ ಆಚಾರ್ ಹಿಂದಾರು, ಮಹೇಶ್ಚಂದ್ರ ಸಾಲ್ಯಾನ್, ಅಶೋಕ್ ಕುಮಾರ್ ಪುತ್ತಿಲ, ಅಣ್ಣಿ ಪೂಜಾರಿ ಹಿಂದಾರುರವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ನೀಲಪ್ಪ ಕುರೆಮಜಲು, ಮೋನಪ್ಪ ಗುತ್ತಿನಪಾಲು, ಪುರಂದರ ನಡುಬೈಲು, ಅವಿನಾಶ್ ಇಂದಿರಾನಗರ, ಮನು ಎಂ ರೈ, ಬಾಲಕೃಷ್ಣ ಕುರೆಮಜಲು, ನಾರಾಯಣ ನಾಯ್ಕ, ಅನಿಲ್ ಒತ್ತೆಮುಂಡೂರು, ಸದಾಶಿವ ಶೆಟ್ಟಿ ಪಟ್ಟೆ, ಸುಽರ್ ಶೆಟ್ಟಿ ನೇಸರಕಂಪ, ಗೀತಾ ಕುರೆಮಜಲು, ಸೀತಾರಾಮ ಗೌಡ ಒತ್ತೆಮುಂಡೂರು, ಸುಂದರ ನಾಯ್ಕ ಬಿ.ಕೆ ಹಾಗೂ ಮೋಹನ ಕೇದಗೆದಡಿ ಆಯ್ಕೆಯಾದರು.

ಸಂಚಾಲಕರಾಗಿ ಧನಂಜಯ ಕಲ್ಲಮ, ಸಹ ಸಂಚಾಲಕರಾಗಿ ಶ್ರೀಧರ್ ನಾಯ್ಕ ಪುತ್ತಿಲ, ರುಕ್ಮಯ್ಯ ಕೇದಗೆದಡಿ, ಪ್ರಸಾದ್ ಬಿ.ಕೆ, ಹಾಗೂ ಪ್ರತೀಕ್ ಪುತ್ತಿಲ ಆಯ್ಕೆಯಾದರು.

LEAVE A REPLY

Please enter your comment!
Please enter your name here