- ಅಧ್ಯಕ್ಷರಾಗಿ ವೀಣಾ, ಪ್ರಧಾನ ಕಾರ್ಯದರ್ಶಿ ಚಂದ್ರಿಕಾ ಆಯ್ಕೆ
ಪುತ್ತೂರು; ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಂಪ್ತಿ ಜರಗುವ ವರಮಹಾಲಕ್ಷ್ಮೀ ಪೂಜೆಗೆ ನೂತನ ಸಮಿತಿಯನ್ನು ರಚನೆ ಮಾಡಲಾಗಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅರುಣ್ಕುಮಾರ್ ಬೋಳೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಭಕ್ತಾದಿಗಳ ಸಭೆಯಲ್ಲಿ ಪೂಜಾ ಸಮಿತಿಯನ್ನು ರಚನೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ವೀಣಾ ಬೋಳೋಡಿಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಿಕಾ ಕುಕ್ಕುಂಜೋಡು, , ಉಪಾಧ್ಯಕ್ಷರುಗಳಾಗಿ ಪೂರ್ಣಿಮಾ ರೈ ಕೊಡೆಂಕಿರಿ, ಪ್ರಜ್ಞಾ ರೈ ಕೆದಂಬಾಡಿಗುತ್ತು, ಕಾರ್ಯದರ್ಶಿಗಳಾಗಿ ವಸಂತಿ ಬೋಳೋಡಿ, ಭವಾನಿ , ಕೋಶಾದಿಕಾರಿಯಾಗಿ ಪವಿತ್ರ ಕಂಪ ಮುಂಡೂರು ರವರುಗಳನ್ನು ನೇಮಕ ಮಾಡಲಾಯಿತು. ಸರ್ವ ಭಕ್ತಾದಿಗಳ ನೆರವಿನೊಂದಿಗೆ ದೇವಳದಲ್ಲಿ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.