ಲಾವತ್ತಡ್ಕ: ಆನೆ ದಾಳಿ, ಕೃಷಿಗೆ ಹಾನಿ

0


ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಲಾವತ್ತಡ್ಕದಲ್ಲಿ ಕಾಡಾನೆಯೊಂದು ತೋಟಕ್ಕೆ ದಾಳಿ ನಡೆಸಿ ಕೃಷಿಗೆ ಹಾನಿಗೊಳಿಸಿರುವ ಘಟನೆ ನಡೆದಿದೆ. ಲಾವತ್ತಡ್ಕ ನಿವಾಸಿ ಮೋಹನ ಗೌಡ ಎಂಬವರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆ ಅಡಿಕೆ ಕೃಷಿ ಹಾನಿಗೊಳಿಸಿದೆ. ಆನೆ ದಾಳಿಯಿಂದ ತೋಟದಲ್ಲಿನ ಪೈಪ್‌ಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ. ಇದರಿಂದಾಗಿ ಮೋಹನ ಗೌಡರವರಿಗೆ ಸಾವಿರಾರು ರೂ.ನಷ್ಟ ಸಂಭವಿಸಿದೆ.

LEAVE A REPLY

Please enter your comment!
Please enter your name here