ಕೆಯ್ಯೂರು ದೇವಳದಲ್ಲಿ  ಭಕ್ತಾಧಿಗಳ ಸಭೆ

0

 ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚನೆ ಮಾಡಲಾಯಿತು. ವಾಸ್ತು ಶಿಲ್ಲಿ ಪ್ರಸಾದ್ ಮುನಿಯಂಗಳ ಅವರನ್ನು ಭಕ್ತರ ಸಮ್ಮುಖದಲ್ಲಿ  ಸೂಚಿಸಲಾಯಿತು.ಈ ಸಂದರ್ಭದಲ್ಲಿ ಕೆಯ್ಯೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಜಿ ವ್ಯವಸ್ಥಾಪಾನ ಸಮಿತಿ ಅದ್ಯಕ್ಷರು, ಸದಸ್ಯರು, ಭಜನಾ ಮಂಡಳಿ ಅಧ್ಯಕ್ಷರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರ ಗ್ರಾಮಸ್ಥರು ಉಪಸ್ಥಿತರಿದ್ದರು. ಕೆಯ್ಯೂರು ದೇವಳದ ಕಾರ್ಯದರ್ಶಿ ಚಂದ್ರಶೇಖರ ರೈ ಕಜೆ ಸ್ವಾಗತಿಸಿ, ಕೆಯ್ಯೂರು ದೇವಳದ ವ್ಯವಸ್ಥಾಪಾನಾ ಸಮಿತಿ ಸದಸ್ಯ ಬಾಬು ಪಟಾಳಿ ವಂದಿಸಿದರು.


ಕೆಯ್ಯೂರು: ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರಾರ್ಥವಾಗಿ ವಿಚಾರ ವಿಮರ್ಷೆ ನಡೆಸಲು  ಭಕ್ತಾಧಿಗಳ ಸಭೆಯನ್ನು ಕೆಯ್ಯೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ ಅಧ್ಯಕ್ಷತೆಯಲ್ಲಿ ದೇವಳದ ವಠಾರದಲ್ಲಿ ಜು12ರಂದು ನಡೆಯಿತು.

LEAVE A REPLY

Please enter your comment!
Please enter your name here