ಪುತ್ತೂರು; ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ಕಟ್ಟೆಯ ಮುಂಭಾಗದಲ್ಲಿ ನಡೆಯಲಿರುವ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಹಾಗೂ ಚಪ್ಪರ ಮುಹೂರ್ತವು ಪುರುಷರಕಟ್ಟೆ ಮಹಾಲಿಂಗೇಶ್ವರ ಕಟ್ಟೆಯ ಬಳಿ ನಡೆಯಿತು.
ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯ ಪೂಜಾವಿಧಿ ವಿಧಾನಗಳನ್ನು ನೆರವೇರಿಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಪುರುಷ ಎಂ.ಪುರುಷರಕಟ್ಟೆ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಕಾರ್ಯದರ್ಶಿ ಹರೀಶ್ ದೇವಾಡಿಗ, ಖಜಾಂಚಿ ಕೃಷ್ಣಪ್ಪ ಶೆಟ್ಟಿಮಜಲು, ಸುಬ್ರಹ್ಮಣ್ಯ ಪೂಜಾರಿ ಪುರುಷರಕಟ್ಟೆ, ಚಿದಾನಂದ ಸುರುಳಿಮಜಲು ಚಪ್ಪರಮುಹೂರ್ತ ನೆರವೇರಿಸಿದರು.
ಪ್ರಮುಖರಾದ ಉಮೇಶ್ ಎಂ. ಇಂದಿರನಗರ, ಸಂತೋಷ್ ಜೋಗಿ, ದೇವಿಪ್ರಸಾದ್ ಉದಯಭಾಗ್ಯ, ರವೀಂದ್ರ ರೈ, ಗಂಗಾಧರ ಜೋಗಿ, ಸುರೇಶ್ ಪ್ರಭು ಇಂದಿರಾನಗರ, ಕಿರಣ್ ಉದಯಭಾಗ್ಯ, ಸತೀಶ್ ಪಿ. ಇಂದಿರಾನಗರ, ವಸಂತ ಪೂಜಾರಿ ಮಾಯಂಗಲ, ಪ್ರಕಾಶ್ ಪುರುಷರಕಟ್ಟೆ, ಆನಂದ ಕೋಡಿಮಜಲು, ಅನಿಲ್ ಶೆಟ್ಟಿ ಇಂದಿರನಗರ, ಸತೀಶ್ ಪುರುಷರಕಟ್ಟೆ, ಕಿಶನ್ ಸರೋಳಿ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.