ಪುತ್ತೂರು: ನಗರದ ಹೃದಯಭಾಗದಲ್ಲಿರುವ ಮಾಯಿದೆ ದೇವುಸ್ ಚರ್ಚ್ ನ ಭಾರತೀಯ ಕಥೋಲಿಕ್ ಯುವ ಸಂಚಲನ(ಐಸಿವೈಎಂ)ದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಿರ್ದೇಶಕರಾದ ಲಾರೆನ್ಸ್ ಮಸ್ಕರೇನ್ಹಸ್ ರವರ ಮಾರ್ಗದರ್ಶನದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಜೋಯ್ಸನ್ ಎಮ್ಮಾನ್ಯುಯೆಲ್ ಡಿಸೋಜ, ಉಪಾಧ್ಯಕ್ಷರಾಗಿ ರೋಯ್ಸ್ಟನ್ ರೆಬೆಲ್ಲೋ ಹಾಗೂ ಎಜಿತಾ ಮೊಂತೇರೋ, ಪ್ರಧಾನ ಕಾರ್ಯದರ್ಶಿಯಾಗಿ ವೆನಿಶಾ ಸಲ್ದಾನ್ಹಾ, ಜೊತೆ ಕಾರ್ಯದರ್ಶಿಯಾಗಿ ಲಿಶಾ ಮಾರ್ಟಿಸ್, ಕೋಶಾಧಿಕಾರಿಯಾಗಿ ಜೋಯ್ಸ್ಟನ್ ಡಿ’ಸೋಜ, ಲೆಕ್ಕಪರಿಶೋಧಕರಾಗಿ ಲಿಯಾನ್ನಾ ರೊಡ್ರಿಗಸ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಶೆಲ್ಡನ್ ಪಾಯಿಸ್, ಕ್ರೀಡಾ ಕಾರ್ಯದರ್ಶಿಯಾಗಿ ಆಶ್ಲಿ ಲೋಬೊ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬಬಿತಾ ತೋರಸ್, ರೆಡ್ ಡ್ರಾಪ್ ಪ್ರತಿನಿಧಿಯಾಗಿ ಮಹಿಮ್ ಮೊಂತೇರೋರವರು ಆಯ್ಕೆಯಾಗಿರುತ್ತಾರೆ.
ಸಂಘಟನೆಯ ಸಹಾಯಕ ನಿರ್ದೇಶಕರಾಗಿ ಚರ್ಚ್ ಸಹಾಯಕ ಧರ್ಮಗುರು ಕೆವಿನ್ ಲಾರೆನ್ಸ್ ಡಿ’ಸೋಜ, ಆನಿಮೇಟರುಗಳಾಗಿ ರೋಹನ್ ಡಾಯಸ್ ಹಾಗೂ ಸಿಸ್ಟರ್ ಶಾಂತಿ ಆಗ್ನೇಸ್ ರವರು ಸಂಘಟನೆಯನ್ನು ಮುನ್ನೆಡೆಸಲಿದ್ದಾರೆ ಎಂದು ಚರ್ಚ್ ಪ್ರಕಟಣೆ ತಿಳಿಸಿದೆ.