ಪುತ್ತೂರು:ಇಲ್ಲಿನ ಬಸ್ ನಿಲ್ದಾಣದ ಬಳಿ ಕಳೆದ ಹಲವಾರು ವರ್ಷಗಳಿಂದ ವ್ಯವಹಾರ ನಿರತವಾಗಿರುವ ದಿನೇಶ್ ಬೇಕರಿಯ ಮಾಲಕರಾಗಿದ್ದ ಪುತ್ತೂರು ಪಾಂಗಳಾಯಿ ನಿವಾಸಿ ಐತ್ತಪ್ಪ ಭಂಡಾರಿ(85ವ.)ಯವರು ಮೂಡಬಿದ್ರೆಯಲ್ಲಿರುವ ಪುತ್ರ ದಿನೇಶ್ ಅವರ ಮನೆಯಲ್ಲಿ ಜು.13ರಂದು ನಿಧನರಾದರು.
1965ರಲ್ಲಿ ಪುತ್ತೂರಿನಲ್ಲಿ ಪ್ರಥಮವಾಗಿ ದಿನೇಶ್ ಬೇಕರಿಯನ್ನು ಪ್ರಾರಂಭಿಸಿದ್ದ ಇವರು ಜನಪ್ರಿಯರಾಗಿದ್ದರು.ಮೃತರು ಪುತ್ರರಾದ ದಿನೇಶ,ಗಣೇಶ,ಯತೀಶ, ಮಹೇಶರವರನ್ನು ಅಗಲಿದ್ದಾರೆ.