ಜು. 15: ರೇಡಿಯೋ ಪಾಂಚಜನ್ಯದಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಭಕ್ತಿಗೀತೆ ಸ್ಪರ್ಧೆ

0

ಪುತ್ತೂರು : ಸಮುದಾಯ ಬಾನುಲಿ ರೇಡಿಯೋ ಪಾಂಚಜನ್ಯ 90.8 ಎಫ್ ಎಂ, ಇನ್ನರ್ ವೀಲ್ ಮತ್ತು ಮುಳಿಯ ಜ್ಯುವೆಲ್ಸ್ ಸಹಯೋಗದಲ್ಲಿ ಜು. 15ರಂದು ಬೆಳಿಗ್ಗೆ 9ಕ್ಕೆ ನಾಗರ ಪಂಚಮಿ ಪ್ರಯುಕ್ತ ವಿಶೇಷ ಭಕ್ತಿಗೀತೆ ಸ್ಪರ್ಧೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಆಯೋಜಿಸಿದೆ. ಭಕ್ತಿಗೀತೆಯನ್ನು ಹಾಡುವ ಅವಧಿ 3+1 ನಿಮಿಷ ಆಗಿದ್ದು 1 ರಿಂದ 4ನೇ ತರಗತಿ ಮತ್ತು 5 ರಿಂದ 7ನೇ ತರಗತಿಯ ಮಕ್ಕಳಿಗೆ ಎರಡು ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದೆ. ಪ್ರತಿ ಶಾಲೆಯಿಂದ 5 ವಿದ್ಯಾರ್ಥಿಗಳಿಗೆ ಅವಕಾಶ ಇರಲಿದೆ. ನಾಗದೇವರ ಮತ್ತು ನಾಗರ ಪಂಚಮಿ ಹಬ್ಬದ ವಿಶೇಷತೆ ಕುರಿತ ಸ್ವರಚಿತ ಕವನ ವಾಚನ ಸ್ಪರ್ಧೆ(3+1 ನಿಮಿಷ) ಕೂಡ ನಡೆಯಲಿದೆ. ಕವನಗಳು ಕನಿಷ್ಟ 12 ಸಾಲು, ಗರಿಷ್ಟ 22 ಸಾಲಿನೊಳಗೆ ಇರಬೇಕಾಗುತ್ತದೆ. 8ರಿಂದ 10ನೇ ತರಗತಿಯ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಸ್ಪರ್ಧೆಯು ರೇಡಿಯೋ ಪಾಂಚಜನ್ಯದ ಕಚೇರಿಯಲ್ಲಿ ನಡೆಯಲಿದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 8050809885  ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here