ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಇದರ ಕೇಂದ್ರ ಸಮಿತಿಯ ಮಾಸಿಕ ಸಭೆ ಕೆಮ್ಮಾಯಿ ಶ್ರೀವಿಷ್ಣು ಮಂಟಪದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ಜರಗಿತು. ಸರಳ ಯೋಗ ಹಾಗು ಭಜನಾ ಕಾರ್ಯಕ್ರಮದ ಮೂಲಕ ಕೈಯೂರು ನಾರಾಯಣ ಭಟ್ ಸತ್ಸಂಗ ನಡೆಸಿಕೊಟ್ಟರು. ಮೂಡಾಯೂರು ಗುತ್ತು ನರೇಂದ್ರ ಪಡಿವಾಳ್ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಹಿರಿಯರಲ್ಲಿರುವ ಜ್ಞಾನ ಸಂಪತ್ತು ಕಿರಿಯರಿಗೆ ಮಾರ್ಗದರ್ಶನವಾಗಲಿ ಎಂದು ಶುಭಹಾರೈಸಿದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ| ಎ.ವಿ.ನಾರಾಯಣ ಪ್ರಾಸ್ತಾವಿಕ ಮಾತನಾಡಿ ಪ್ರತಿಷ್ಠಾನದ ಉದ್ದೇಶ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ| ವಸಂತ ಕುಮಾರ ತಾಳ್ತಜೆ ಕೃಷಿ ಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡಿ ಭಾರತದ ಕೃಷಿ ಸಂಸ್ಕೃತಿಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳಿದ್ದು ಅದರ ಅರ್ಥಪೂರ್ಣ ಆಚರಣೆಯು ಹಿಂದಿನ ಅಗತ್ಯವಾಗಿದೆ ಎಂದು ತಿಳಿಸಿದರು. ಕೆಮ್ಮಾಯಿ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಪತಿ ಬೈಪಡಿತಾಯ, ಶ್ರೀಧರ ಬೈಪಾಡಿತ್ತಾಯ ಶುಭ ಹಾರೈಸಿದರು. ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷ ಪ್ರೊ.ವತ್ಸಲಾ ರಾಜ್ನಿ, ಸಮಿತಿಯ ವಕ್ತಾರ ಬಾಲಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿ ದಿವಾಕರ್ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿದ್ದರು. ಇತ್ತೀಚೆಗೆ ಚಾರ್ಧಾಮ ಯಾತ್ರೆ ಪೂರೈಸಿ ಬಂದ ಪ್ರತಿಷ್ಠಾನದ ಉಪಾಧ್ಯಕ್ಷರಾದ ನೇರಳಕಟ್ಟಿ ಅನಂತಪ್ರಭು ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಅವರು ಮಾತನಾಡಿ ಯಾತ್ರೆಯ ಅನುಭವಗಳನ್ನು ಹಂಚಿಕೊಂಡರು.
ಪ್ರತಿಷ್ಠಾನದ ಪುತ್ತೂರು ಘಟಕ ರಚನೆ:
ಪ್ರತಿಷ್ಠಾನದ ಪುತ್ತೂರು ಘಟಕವನ್ನು ಈ ಸಂದರ್ಭದಲ್ಲಿ ರಚನೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಸಂಜೀವ ನಾಯಕ್ ಕಲ್ಲೇಗ, ಅಧ್ಯಕ್ಷರಾಗಿ ಪುಳು ಈಶ್ವರ ಭಟ್, ಕಾರ್ಯದರ್ಶಿಯಾಗಿ ಬಾಲಕೃಷ್ಣರಾವ್ ಕೊಂಬೆಟ್ಟು, ಸಂಚಾಲಕರಾಗಿ ಉಮೇಶ್ ಶೆಣೈ ಉಪ್ಪಿನಂಗಡಿ ಆಯ್ಕೆಯಾದರು. ಕಲ್ಲೇಗ ನಾರಾಯಣಗೌಡ, ಪದ್ಮಯ.ಎಚ್ ಪಡೀಲ್, ಭಾಸ್ಕರ. ಎ. ಬನ್ನೂರು, ಮಹಾಬಲ ರೈ ಒಳತಡ್ಕ, ಚಂದ್ರಶೇಖರ ಪಡುಮಲೆ, ಗುಂಡ್ಯಡ್ಕ ಈಶ್ವರ ಭಟ್, ಶ್ರೀಪತಿ ಬೈಪಾಡಿತಾಯ ಉಪಾಧ್ಯಕ್ಷರುಗಳಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶ್ರೀರಾಮ ಭಟ್ ಕಲ್ಲೆಗ, ಪ್ರೇಮಲತಾ ರಾವ್, ಶಂಕರಿ ಶರ್ಮ, ಭವಾನಿ ಶಂಕರ ಶೆಟ್ಟಿ ಪುತ್ತೂರು, ನರೇಂದ್ರ ಪಡಿವಾಳ್ ಮೂಡಾಯಿರು ಗುತ್ತು, ರಂಗನಾಥ ರಾವ್ ಬೊಳುವಾರು, ಸುಭಾಸ್ ರೈ ಬೆಳ್ಳಿಪ್ಪಾಡಿ, ರಾಜಗೋಪಾಲ್ ಭಟ್ ಬನ್ನೂರು, ಸಚ್ಚಿದಾನಂದ ಪ್ರಭು, ನಾ.ಕಾರಂತ ಪೆರಾಜೆ, ಪಾಂಡುರಂಗ ನಾಯಕ್ ಪುತ್ತೂರು, ಪಾಂಡುರಂಗ ಹೆಗ್ಡೆ, ಶ್ರೀಪತಿ ನಾಯಕ್ ಅಜೇರುರವರನ್ನು ಆಯ್ಕೆ ಮಾಡಲಾಯಿತು.
ತಾಲೂಕು ಘಟಕಗಳ ಪದಾಧಿಕಾರಿಗಳು, ಸದಸ್ಯರು ಮಂಗಳೂರು ದಕ್ಷಿಣ ವಲಯದ ಗೌರವಾಧ್ಯಕ್ಷ ಪ್ರೊ| ಶ್ರೀರಾಮ ಕಾರಂತ್, ಘಟಕದ ಅಧ್ಯಕ್ಷ ಭರತ್, ಬಾಲಕೃಷ್ಣ ಶೆಟ್ಟಿ, ಶಿವಕುಮಾರ್, ಗಣೇಶ ಆಚಾರ್ಯ ಜೆಪ್ಪು, ಸುಮಿತ್ರ ಕಾರಂತ್, ಸುಜಾತ, ಮಾಧವ, ಜನಾರ್ದನ ಭಾಗವಹಿಸಿದ್ದರು. ಪ್ರತಿಷ್ಠಾನದ ಕೇಂದ್ರ ಸಮಿತಿಯ ಅನಾರು ಕೃಷ್ಣಶರ್ಮ, ಲೋಕೇಶ್ ಹೆಗ್ದೆ ಪುತ್ತೂರು, ಉದಯಶಂಕರ ರೈ ಪುಣಚ, ಜಯಾನಂದ ಪೆರಾಜೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬಾಲಕೃಷ್ಣ ರಾವ್ ಭೋಜನದ ವ್ಯವಸ್ಥೆಯ ಪ್ರಾಯೋಜಕರಾಗಿ ಸಹಕರಿಸಿದರು. ಪ್ರತಿಷ್ಠಾನದ ಸಹ ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ ಉಪಾಧ್ಯಕ್ಷ ದುಗ್ಗಪ್ಪ.ಯನ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ| ವೇದವ್ಯಾಸ ರಾಮಕುಂಜ ವಂದಿಸಿದರು.