ನಾಗರಿಕರಿಂದ ಪಟ್ಟಣ ಪಂಚಾಯತ್ ಗೆ ಮನವಿ-ಮುಖ್ಯಾಧಿಕಾರಿ ಭೇಟಿ, ದುರಸ್ತಿ ಮಾಡುವ ಭರವಸೆ
ಕಡಬ: ಕಡಬಕ್ಕೆ ಸಂಪರ್ಕಿಸುವ ಮಾಲೇಶ್ವರ, ಅಜಿಲಡ್ಕ, ಉದೇರಿ-ಬೊಳ್ಳೂರು ರಸ್ತೆಯೂ ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೆ ದುರಸ್ತಿಗಾಗ್ರಹಿಸಿ ಅಲ್ಲಿನ ನಾಗರಿಕರು ಕಡಬ ಪಟ್ಟಣ ಪಂಚಾಯತ್ ಗೆ ಮನವಿ ನೀಡಿದ್ದು, ಈ ಮನವಿಗೆ ತಕ್ಷಣ ಸ್ಪಂಧಿಸಿದ ಮುಖ್ಯಾಧಿಕಾರಿ ಪಕೀರ ಮೂಲ್ಯ ಅವರು ಇಂಜಿನಿಯರ್ ಜತೆ ತೆರಳಿ ರಸ್ತೆ ವೀಕ್ಷಣೆ ಮಾಡಿದ್ದಾರೆ, ಅಲ್ಲದೆ ಕೂಡಲೇ ದುರಸ್ತಿ ಪಡಿಸುವ ಭರವಸೆಯನ್ನು ನೀಡಿದ್ದಾರೆ.