ಪುತ್ತೂರು : ಪುತ್ತೂರು ರೈಲ್ವೆ ನಿಲ್ದಾಣದ ಮುಂಭಾಗದ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೆ.ಕೆ.ಟೂರ್ಸ್ & ಟ್ರಾವೆಲ್ಸ್ ಏಜೆನ್ಸಿಯ ಎರಡನೇ ಶಾಖೆ ಪುತ್ತೂರು ಪರ್ಲಡ್ಕದ ಶಿವಪೇಟೆಯಲ್ಲಿ ಶುಭಾರಂಭಗೊಂಡಿತು.
ಕಟ್ಟಡದ ಮಾಲಕ ಪಿ. ಶಾರದಾರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕರ್ನಾಟಕ ರಿಕ್ಷಾ ಚಾಲಕಮಾಲಕರ ಸಂಘದ ಉಪಾಧ್ಯಕ್ಷ ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಪುತ್ತು, ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಕೋಶಾಧಿಕಾರಿ ಈಶ್ವರ ನಾಯ್ಕ, ಜಾನಕಿ ಪಂಚೇರು, ಶೋಭಾರವರು ಉಪಸ್ಥಿತರಿದ್ದರು.
ಕರ್ನಾಟಕ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ರೈ, ಸಲಹೆಗಾರರಾದ ಗಿರೀಶ್ ನಾಯ್ಕ ಸೊರಕೆ, ಮಾಜಿ ಅಧ್ಯಕ್ಷರಾದ ನಾಸಿರ್ ಇಡಬೆಟ್ಟು, ಜಲೀಲ್ ಎಂ.ಟಿ.ರೋಡ್, ನಾರಾಯಣ ಕುಲಾಲ್ ಎಸ್., ತೇಜಕುಮಾರ್ ಶುಭ ಹಾರೈಸಿದರು.
ಏಜೆನ್ಸಿ ಮಾಲಕ ಕೆ. ಜಯರಾಮಕುಲಾಲ್, ಪುತ್ರರಾದ ಸುಹಾಸ್ ಕೆ., ವಿಜೇತ, ಅಣ್ಣ ಬಾಲಕೃಷ್ಣ ಮತ್ತು ಶ್ರೀಧರ ಉಪಸ್ಥಿತರಿದ್ದರು. ಕೆ. ಜಯರಾಮಕುಲಾಲ್ ಸ್ವಾಗತಿಸಿ, ನಮ್ಮ ಏಜೆನ್ಸಿ ಮೂಲಕ ಪ್ರತಿ ಸೋಮವಾರ ಮತ್ತು ಶುಕ್ರವಾರ 2 ದಿನಗಳ ಪ್ಯಾಕೇಜ್ ಟೂರ್ ವ್ಯವಸ್ಥೆಯಿದ್ದು, ತಿರುಪತಿ, ಪದ್ಮಾವತಿ, ಕಾಳಹಸ್ತಿ, ವರಾಹ ಸ್ವಾಮಿ, ಕಪಿಲತೀರ್ಥ ಈ ಎಲ್ಲಾ ಕೇಂದ್ರಗಳಿಗೆ ಭೇಟಿ ಜೊತೆಗೆ ತಿರುಪತಿ ದೇವರ ದರ್ಶನ ಟಿಕೇಟು, ಗೈಡ್, ಊಟ ವಸತಿ ಸೇರಿ ರೂ. 4,700/- ಆಗಿರುತ್ತದೆ. ಹಾಗೂ ದೇವರ ಮುಡಿಪುಕೊಂಡೊಯ್ಯುವವರಿಗೆ ವ್ಯವಸ್ಥೆ ಇದೆ. ಹೋಗಲು ಇಚ್ಛಿಸುವವರು ಹಣ ಪಾವತಿಸಿ ಹೆಸರು ನೊಂದಾಯಿಸಿಕೊಳ್ಳಬಹುದು. ಅಥವಾ ಕಛೇರಿಯನ್ನು ಸಂಪರ್ಕಿಸಬಹುದು. ಮೊಬೈಲ್ : 9945277507, 9108550105 ಸಂಬರ್ಗೆ ಕರೆ ಮಾಡುವಂತೆ ತಿಳಿಸಿದರು. ಸುಹಾಸ್ ಕೆ. ವಂದಿಸಿದರು.