ಪುತ್ತೂರು: ಜು.13 ರಂದು ಸಂಜೆ ಬೀಸಿದ ಭಾರೀ ಗಾಳಿಗೆ ಕೆಯ್ಯೂರು ಗ್ರಾಮದ ಮಾಡಾವು ಬೊಳಿಕ್ಕಲದಲ್ಲಿರುವ ಸುಮಾವತಿ ಎಂಬವರ ಶೀಟು ಹಾಸಿದ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿತ್ತು. ಈ ಬಗ್ಗೆ ಸುಮಾವತಿಯವರು ಪಂಚಾಯತ್ ವಾರ್ಡ್ ಸದಸ್ಯ ಜಯಂತ ಪೂಜಾರಿ ಕೆಂಗುಡೇಲುರವರಿಗೆ ವಿಷಯ ತಿಳಿಸಿದ್ದರು. ಈ ಬಗ್ಗೆ ಕೆಯ್ಯೂರು ಗ್ರಾಮೀಣ ಕಾಂಗ್ರೆಸ್ನ ನಿಯೋಗವೊಂದು ಜು.14 ರಂದು ಸುಮಾವತಿಯವರ ಮನೆಗೆ ತೆರಳಿ ಆರ್ಥಿಕ ನೆರವು ನೀಡಿತು. ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಎ.ಕೆ.ಜಯರಾಮ ರೈಯವರು ಮಾತನಾಡಿ, ಗ್ರಾಮೀಣ ಕಾಂಗ್ರೆಸ್ನ ವತಿಯಿಂದ ಈ ಪುಟ್ಟ ನೆರವನ್ನು ನೀಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾಪಂ ಸದಸ್ಯರುಗಳಾದ ಅಬ್ದುಲ್ ಖಾದರ್ ಮೇರ್ಲ, ಅಮಿತಾ ಎಚ್.ರೈ,ಬಟ್ಯಪ್ಪ ರೈ ದೇರ್ಲ, ಶೇಷಪ್ಪ ದೇರ್ಲ, ಕೃಷಿಕ ಸಂತೋಷ್ ಕುಮಾರ್ ರೈ ಇಳಂತಾಜೆ, ಭಾಗ್ಯೇಶ್ ರೈ ಕೆಯ್ಯೂರು, ಹರಿನಾಥ ರೈ ಕೂಡೇಲು, ಹನೀಫ್ ಕೆ.ಎಂ ಮಾಡಾವು, ನಾರಾಯಣ ಪೂಜಾರಿ ಕೆಯ್ಯೂರು, ನಿಝಾಮ್ ಮಾಡಾವು, ಇಸಾಕ್ ಮಾಡಾವು, ಹಾರೀಸ್ ಪಾತುಂಜ, ಆಯೂಬ್ ಮಾಡಾವು ಮತ್ತಿತರರು ಉಪಸ್ಥಿತರಿದ್ದರು. ಗ್ರಾಮೀಣ ಕಾಂಗ್ರೆಸ್ ಕಾರ್ಯದರ್ಶಿ, ಕೆಯ್ಯೂರು ಗ್ರಾಪಂ ಸದಸ್ಯ ಜಯಂತ ಪೂಜಾರಿ ಕೆಂಗುಡೇಲು ಸ್ವಾಗತಿಸಿ, ವಂದಿಸಿದರು.