ಭಾರೀ ಗಾಳಿ-ಮನೆಗೆ ಹಾನಿ-ಕೆಯ್ಯುರು ಗ್ರಾಪಂನಿಂದ ಭೇಟಿ ಪರಿಶೀಲನೆ

0

 

ಪುತ್ತೂರು: ಜು.13 ರಂದು ಸಂಜೆ ವೇಳೆ ಬೀಸಿದ ಗಾಳಿಗೆ ಕೆಯ್ಯೂರು ಗ್ರಾಮದ ಬೊಳಿಕ್ಕಲ ಸುಮಾವತಿ ಎಂಬವರ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು ಈ ಬಗ್ಗೆ ವಾರ್ಡ್ ಸದಸ್ಯ ಜಯಂತ ಪೂಜಾರಿಯವರಿಗೆ ಸುಮಾವತಿಯವರು ವಿಷಯ ತಿಳಿಸಿದ್ದರು. ಈ ಬಗ್ಗೆ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಸದಸ್ಯೆ ಮೀನಾಕ್ಷಿ ವಿ.ರೈ, ಅಭಿವೃದ್ಧಿ ಅಧಿಕಾರಿ ನಮಿತಾ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಮಕರಣಿಕ ಸ್ವಾತಿ, ಸಹಾಯಕ ನಾರಾಯಣ್, ಆಶಾ ಕಾರ್ಯಕರ್ತೆ ಸೋಮಾವತಿ ಆಗಮಿಸಿ ಪರಿಶೀಲನೆ ನಡೆಸಿದ್ದರು. ತುರ್ತು ಪರಿಹಾರವಾಗಿ ಪಂಚಾಯತ್‌ನಿಂದ 2 ಸಾವಿರ ರೂ. ಅನ್ನು ನೀಡಲಾಯಿತು.

LEAVE A REPLY

Please enter your comment!
Please enter your name here