ಜು.16 : ಉಳ್ಲಾಲ್ತಿ, ಉಳ್ಳಾಕುಲು ಪರಿವಾರ ದೈವಸ್ಥಾನದಲ್ಲಿ ಸಂಕ್ರಮಣ ತಂಬಿಲ

0

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಅಧೀನದ ಉಳ್ಳಾಲ್ತಿ ಉಳ್ಳಾಕುಲು ಪರಿವಾರ ದೈವಸ್ಥಾನದಲ್ಲಿ ಜು.16 ರಂದು ಬೆಳಿಗ್ಗೆ 9ಕ್ಕೆ ಸಂಕ್ರಮಣ ತಂಬಿಲ ನಡೆಯಲಿದೆ. ಭಕ್ತಾದಿಗಳು ಒಂದೊಂದು ದೈವದ ಅಥವಾ ಎಲ್ಲಾ ದೈವಗಳ ಸೇವೆ ನಡೆಸಲು ಅವಕಾಶವಿದೆ. ರೂ‌2000 ನೀಡಿ ಸಂಕ್ರಮಣ ತಂಬಿಲದ ಸೇವಾದಾರರಾಗಬಹುದು. ಸುಮಾರು 21 ಸಿಯಾಳ, ಕೇಪಳ ಹೂವು, ಮಲ್ಲಿಗೆ, ತುಳಸಿ ಮಾಲೆ, ಹಿಂಗಾರ ಅಗತ್ಯವಿದೆ. ಇದರ ಸೇವೆಯನ್ನೂ ನೀಡಲು ಅವಕಾಶವಿದೆ. ಒಂದೊಂದು ಸೀಯಾಳ ನೀಡಬಹುದು. ಇಂದು ಸಂಜೆ 4 ಗಂಟೆ ಮೊದಲು ಉಳ್ಳಾಲ್ತಿ ದೈವಸ್ಥಾನಕ್ಕೆ ಒಪ್ಪಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here