- ಕ್ರೇನ್ ಮೂಲಕ ತೆರವು ಕಾರ್ಯಾಚರಣೆ
ಪುತ್ತೂರು: ಬೃಹತ್ ಗಾತ್ರದ ಮರವೊಂದು ಹಟ್ಟಿ ಮತ್ತು ಕೊಟ್ಟಿಗೆಯ ಮೇಲೆ ಬಿದ್ದು ಹಟ್ಟಿ ಕೊಟ್ಟಿಗೆ ಹಾನಿಗೊಂಡ ಘಟನೆ ಜು.15ರಂದು ಮುಂಡೂರು ಗ್ರಾಮದ ನಡುಬೈಲು ಎಂಬಲ್ಲಿ ನಡೆದಿದೆ. ನಡುಬೈಲು ನಿವಾಸಿ ತಿಮ್ಮಪ್ಪ ಗೌಡರ ಮನೆಯ ಅನತಿ ದೂರದಲ್ಲಿರುವ ಹಟ್ಟಿ ಕೊಟ್ಟಿಗೆ ಮೇಲೆ ಮರ ಬಿದ್ದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ. ಮರ ಬೀಳುವ ವೇಳೆ ಜಾನುವಾರುಗಳನ್ನು ಹಟ್ಟಿಯ ಹೊರಭಾಗದಲ್ಲಿ ಕಟ್ಟಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಕ್ರೇನ್ ಮೂಲಕ ಹಟ್ಟಿ ಕೊಟ್ಟಿಗೆಯ ಮೇಲೆ ಬಿದ್ದ ಮರವನ್ನು ತೆರವುಗೊಳಿಸಲಾಯಿತು. ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಸುಂದರ ಗೌಡ ನಡುಬೈಲು ಮತ್ತಿತರರು ಮರ ತೆರವುಗೊಳಿಸುವಲ್ಲಿ ಸಹಕರಿಸಿದರು. ಘಟನಾ ಸ್ಥಳಕ್ಕೆ ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್, ಗ್ರಾಮ ಕರಣಿಕರಾದ ತುಳಸಿ, ಗ್ರಾಮ ಸಹಾಯಕರಾದ ಪುಟ್ಟಣ್ಣ ಗೌಡ, ಹರ್ಷಿತ್ ನೇರೋಳ್ತಡ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.