ವಿದ್ಯಾರ್ಥಿನಿಗೆ ಚಾಕಲೇಟ್ ಕೊಟ್ಟು ಸೆಲ್ಫಿ ತೆಗೆಯಲೆತ್ನ – ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ತಂಡದಿಂದ ಹಲ್ಲೆ ಆರೋಪ

0

ಪುತ್ತೂರು: ವಿದ್ಯಾರ್ಥಿನಿಯೊಬ್ಬರಿಗೆ ಅನ್ಯಕೋಮಿನ ವಿದ್ಯಾರ್ಥಿ ಚಾಕಲೇಟ್ ಕೊಟ್ಟು ಸೆಲ್ಫಿ ತೆಗೆಯಲೆತ್ನಿಸಿದ್ದನ್ನು ಪ್ರಶ್ನಿಸಿದ ಹಿಂದು ವಿದ್ಯಾರ್ಥಿಗಳಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ನಡೆದ ಬಗ್ಗೆ ವರದಿಯಾಗಿದೆ.

ಪುತ್ತೂರು ಸರಕಾರಿ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯೊಬ್ಬರಿಗೆ ಜು.14ರಂದು ಅದೇ ಕಾಲೇಜಿನ ಅನ್ಯ ಧರ್ಮದ ವಿದ್ಯಾರ್ಥಿ ಚಾಕಲೇಟ್ ಕೊಟ್ಟು ಸೆಲ್ಫಿ ತೆಗೆಯಲೆತ್ನಿಸಿದ್ದ ವಿಚಾರ ತಿಳಿದು ಹಿಂದು ವಿದ್ಯಾರ್ಥಿಗಳು ಆತನನ್ನು ಪ್ರಶ್ನಿಸಿದ ವೇಳೆ ಮಾತಿನ ಚಕಮಕಿ ನಡೆದಿತ್ತು. ಜು.15ರಂದು ಅದೇ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿದ್ದ ವೇಳೆ ಅಪರಿಚಿತ ತಂಡವೊಂದು ಬಂದು ಅವರಿಗೆ ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here