ಬೂಸ್ಟರ್ ಡೋಸ್ ಲಸಿಕಾಕರಣ ಅಮೃತ ಮಹೋತ್ಸವಕ್ಕೆ ಚಾಲನೆ

0

ಪುತ್ತೂರು: ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಅಂಗವಾಗಿ ಜು.15ರಿಂದ ಸೆ.30ರ ತನಕ ಉಚಿತ ಬೂಸ್ಟರ್ ಡೋಸ್‌ ನೀಡುವ ಕೋವಿಡ್ ಲಸಿಕಾಕರಣದ‌ ಅಮೃತ ಮಹೋತ್ಸವಕ್ಕೆ ಜು.16ರಂದು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.

ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ದೀಪ ಬೆಳಗಿಸಿ ಚಾಲನೆ ನೀಡಿದರು. ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ ಪ್ರಥಮ ಲಸಿಕೆ ಪಡೆದುಕೊಂಡರು. ತಹಶೀಲ್ದಾರ್ ನಿಸರ್ಗಪ್ರೀಯ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರೋಗ್ಯ ರಕ್ಷ ಸಮಿತಿ ಸದಸ್ಯ ರಫೀಕ್ ಸ್ವಾಗತಿಸಿದರು. ಡಾ.ಯಧುರಾಜ್ ಕಾರ್ಯಕ್ರಮ ನಿರೂಪಿಸಿದರು. ಎಕ್ಸರೇ ವಿಭಾಗದ ಎಫ್.ಜಿ.ಎಂ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here