ಪುತ್ತೂರು: 2022ರ ಎಪ್ರಿಲ್ ನಲ್ಲಿ ನಡೆದ ಜವಾಹರ್ ನವೋದಯ 6ನೇ ತರಗತಿಯ ಪ್ರವೇಶ ಪರೀಕ್ಷೆಯಲ್ಲಿ ಸುದಾನ ರೆಸಿಡೆನ್ಸಿಯಲ್ ಸ್ಕೂಲ್ನ 5 ನೇ ತರಗತಿ ವಿದ್ಯಾರ್ಥಿ ಅಮೃತ್ ಬಿ. ರವರು ದಕ್ಷಿಣ ಕನ್ನಡ ಜಿಲ್ಲೆಗೆ 6ನೇ ಸ್ಥಾನ ಪಡೆದು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಬೆದ್ರಾಳ ನಿವಾಸಿ ನಿವೃತ ಸೇನಾನಿ, ವಿಟ್ಲ ಸಿಪಿಸಿಆರ್ಐ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಮೇಶ್ ಕೆ. ಮತ್ತು ಗೀತಾ ಡಿ. ದಂಪತಿ ಪುತ್ರ.