ರಾಮಕುಂಜ: ರಾಮಕುಂಜ ಗ್ರಾಮದ ಸಂಪ್ಯಾಡಿ ಅರ್ಬಿ ದಿ.ಬೂಚಗೌಡರ ಪುತ್ರ ಧನಂಜಯ(48ವ.)ರವರು ಜು.14ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಡಿಕೆಗೆ ಮದ್ದು ಸಿಂಪಡಣೆ ಕೆಲಸ ಮಾಡುತ್ತಿದ್ದ ಧನಂಜಯರವರಿಗೆ ಜು.14ರಂದು ಸಂಜೆ ವೇಳೆ ಕೆಲಸ ಮಾಡುತ್ತಿದ್ದಾಗಲೇ ಎದೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ಆಲಂಕಾರಿನ ವೈದ್ಯರಲ್ಲಿಗೆ ಚಿಕಿತ್ಸೆಗೆ ಹೋಗಿದ್ದು ಪುತ್ತೂರಿನ ಆಸ್ಪತ್ರೆಗೆ ಹೋಗುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ಅವರು ದಾರಿಮಧ್ಯೆಯೇ ಕೊನೆಯುಸಿರೆಳೆದರು ಎಂದು ವರದಿಯಾಗಿದೆ. ಕೃಷಿಕರಾಗಿದ್ದ ಧನಂಜಯರವರು ಅಡಿಕೆ ಕೊಯ್ಯುವುದು, ಮದ್ದು ಸಿಂಪಡಣೆ ಕೆಲಸ ಮಾಡುತ್ತಿದ್ದರು. ಮೃತರು ತಾಯಿ ರೇವತಿ, ಪತ್ನಿ ಉಷಾ ಪಿ.ಕೆ., ಪುತ್ರಿ ರಚನಾ, ಪುತ್ರ ಮಿಥುನ್ರವರನ್ನು ಅಗಲಿದ್ದಾರೆ.