ಪುತ್ತೂರು: ಕಾವು ಹೇಮನಾಥ್ ಶೆಟ್ಟಿ ಅಭಿಮಾನಿ ಬಳಗದಿಂದ ನಿಜಾಮ್ ಸಾಹಿತ್ಯ ನೀಡಿ ಗಾಯಕ ಅಶ್ರಫ್ ಸವಣೂರು ಹಾಡಿರುವ ಕೆಪಿಸಿಸಿ ಸಂಯೋಜಕರಾಗಿರುವ ಕಾವು ಹೇಮನಾಥ್ ಶೆಟ್ಟಿ ಅವರ ಕುರಿತಾದ ವಿಡಿಯೋ ಬಿಡುಗಡೆ ಹೇಮನಾಥ ಶೆಟ್ಟಿಯವರ ಕಚೇರಿಯಲ್ಲಿ ಜು.15ರಂದು ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ ಯವರು ವಿಡಿಯೋ ಆಲ್ಬಂ ಬಿಡುಗಡೆ ಮಾಡಿದರು.
ಕಳೆದ ಸುಮಾರು ೩೫ವರ್ಷಗಳಿಂದ ಸಕ್ರಿಯವಾಗಿ ರಾಜಕೀಯ , ಧಾರ್ಮಿಕ ,ಸಾಮಾಜಿಕವಾಗಿ ಶೈಕ್ಷಣಿಕ ವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾವು ಹೇಮನಾಥ ಶೆಟ್ಟಿಯವರು ಮಾಡಿರುವ ಸಾಧನೆ ಮತ್ತು ಸಮಾಜ ಸೇವೆಯ ಮಾಹಿತಿ ಅಲ್ಬಂನಲ್ಲಿ ಅಡಕವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಲ್ಯಾನ್ಸಿ ಮಸ್ಕರೇನಸ್ ಕಾವು ಹೇಮನಾಥ ಶೆಟ್ಟಿಯವರು ಪಕ್ಷಕ್ಕೆ ಸಲ್ಲಿಸಿರುವ ಪ್ರಾಮಾಣಿಕ ಸೇವೆ ಮತ್ತು ಅವರು ಸಮಾಜಕ್ಕೆ ಮಾಡಿರುವ ಸೇವೆಗಳನ್ನು ಪ್ರತೀಯೊಬ್ಬರು ತಿಳಿದುಕೊಂಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಅವರಿಗೆ ಅವಕಾಶ ಒದಗಬೇಕು ಎಂಬುದೇ ಎಲ್ಲಾ ಕಾರ್ಯಕರ್ತರ ಆಶಯವಾಗಿದೆ. ಪುತ್ತೂರು ಅಭಿವೃದ್ದಿ ಮಾಡಲು ಅವರಿಗೆ ಜನ ಅವಕಾಶ ನೀಡಲಿದ್ದಾರೆ ಎಂದು ಹೇಳಿದರು.
ಗಂಗಾಧರ್ ರೈ ಎಲಿಕಾ, ಹನೀಫ್ ಮುಂಡೂರು ,ನೇಮಕ್ಷಾ ಸುವರ್ಣ, ಇಸ್ಮಾಯಿಲ್ ಎಂಬಿ , ಹನೀಫ್ ಪುಂಚತ್ತಾರ್ , ಕೆಸಿ ಅಶೋಕ್ ಶೆಟ್ಟಿ ಅಮೀನ್ ಅಕರ್ಷಣ್ , ಅನ್ವರ್ ಖಾಸಿಂ , ಧಿವ್ಯನಾಥ್ ಶೆಟ್ಟಿ ಕಾವು , ಬಷೀರ್ ಪರ್ಲಡ್ಕ, ರವೂಫ್ ಸಾಲ್ಮರ ,ಹ್ಯಾರಿಸ್ ಮಾಡಾವು, ಇಬ್ರಾಹಿಂ ಸಂಪ್ಯ , ಕೊರಗಪ್ಪ ಗೌಡ , ಮೋನಪ್ಪ ಎಂ , ರವಿಪ್ರಸಾದ್ ಶೆಟ್ಟಿ , ಸಲೀಂ ಬಪ್ಪಳಿಗೆ , ಫಯಾಜ್ ಪುರಷರಕಟ್ಟೆ , ಸೈಯದ್ ಕಬಕ , ರೋಹಿತ್ ಪೂಜಾರಿ , ಫಾರೂಕ್ ಬಾಯಬೆ , ಇಮ್ತಿಯಾಜ್ ಬಪ್ಪಳಿಗೆ , ಸದಾನಂದ ಶೆಟ್ಟಿ ಕೂರೇಲು , ಪಾವನ ರಾಮ್ , ಮೋನು ಬಪ್ಪಳಿಗೆ , ಗಣೇಶ್ ಶೆಟ್ಟಿ ಅಬೂಬಕ್ಕರ್ ಮುಲಾರ್ , ರವಿ ಅಚಾರ್ಯ ಸಂಪ್ಯ , ಹಬೀಬ್ ಸಂಪ್ಯ , ಶಾನ್ವಾಜ್ ಬಪ್ಪಳಿಗೆ , ಕೇಶವ ಬೆದ್ರಾಳ , ಮೋಹನ್ ನಾಯಕ್, ಕೃಷ್ಣ ನಾಯ್ಕ್ ,ದಾಮೋದರ್ ಶೇವಿರೆ , ಕೃಷ್ಣಪ್ಪ ಪುಜಾರಿ , ಗೌತಮ್ ರೈ , ಶೀನಪ್ಪ ಮೂಲ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಆಲ್ಬಂ ಹಾಡು ಹಾಡಿರುವ ಅಶ್ರಫ್ ಸವಣೂರುರವರನ್ನು ಹೇಮನಾಥ್ ಶೆಟ್ಟಿ ದಂಪತಿಗಳು ಸನ್ಮಾನಿಸಿ ಗೌರವಿಸಿದರು.