ಭಾರೀ ಗಾಳಿಗೆ ಸೆಂಟ್ಯಾರು ಕೂರೇಲುವಿನಲ್ಲಿ ಮನೆಗೆ ಬಿದ್ದ ತೆಂಗಿನ ಮರ – ಮನೆ ಸಂಪೂರ್ಣ ಹಾನಿ

0

 

ಪುತ್ತೂರು: ಭಾರೀ ಗಾಳಿಗೆ ಸೆಂಟ್ಯಾರು ಕೂರೇಲು ಸಮೀಪ ಹಂಚಿನ ಮನೆಯೊಂದಕ್ಕೆ ತೆಂಗಿನ ಮರವೊಂದು ಬಿದ್ದು ಮನೆ ಸಂಪೂರ್ಣ ಹಾನಿಗೊಂಡ ಘಟನೆ ಜು.16 ರ ಮಧ್ಯಾಹ್ನ ಸೆಂಟ್ಯಾರು ಸಮೀಪದ ಕೂರೇಲು ಎಂಬಲ್ಲಿ ನಡೆದಿದೆ.

 


ಕೂರೇಲು ಬಾಲಕೃಷ್ಣ ಎಂಬವರ ಮನೆಗೆ ತೆಂಗಿನ ಮರ ಬಿದ್ದಿದ್ದು, ಮರ ಬೀಳುವ ಸಂದರ್ಭ ಅವರು ಮೊಮ್ಮಕ್ಕೊಳೊಂದಿಗೆ ಮನೆಯಲ್ಲಿದ್ದರು. ತೆಂಗಿನ ಮರ ಮನೆಯ ಮೇಲೆ ಬಿದ್ದಾಗ ಹಂಚಿನ ತುಂಡು ಬಾಲಕೃಷ್ಣ ಅವರ ತಲೆಗೆ ಬಿದ್ದು ಗಾಯವಾಗಿದೆ. ಮೊಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಘಟನೆ ವೇಳೆ ಬಾಲಕೃಷ್ಣ ಅವರ ಮಕ್ಕಳು ಕೆಲಸಕ್ಕೆ ತೆರಳಿದ್ದರು.


ಮನೆ ಮಂದಿ ಸ್ಥಳಾಂತರ:
ಮನೆಯ ಮೇಲೆ ತೆಂಗಿನ ಮರ ಬಿದ್ದರಿಂದ ಮನೆ ಸಂಪೂರ್ಣ ಹಾನಿಗೊಂಡಿದ್ದರಿಂದ ಮನೆಯಲ್ಲಿ ಯಾರೂ ನಿಲ್ಲುವ ಸಾಧ್ಯತೆ ಇಲ್ಲವಾಗಿದ್ದು. ಮನೆ ಮಂದಿಯನ್ನು ಪಕ್ಕದ ಮನೆಗೆ ಸ್ಥಳಾಂತರಿಸಲಾಗಿದೆ. ಕೂರೇಲು ಶರತ್ ಆಳ್ವರವರು ಗಾಯಗೊಂಡ ಬಾಲಕೃಷ್ಣ ರೈ ಮತ್ತು ಮೊಮ್ಮಕ್ಕಳನ್ನು ಸ್ಥಳಾಂತರಿಸಲು ಸಹಕರಿಸಿದ್ದಾರೆ.ಆರ್ಯಾಪು ಗ್ರಾಮದ ಗ್ರಾಮಕರಣಿಕ ಆಶ್ವಿನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here