ವಿಟ್ಲ: ವಿಟ್ಲ ಬಿಲ್ಲವ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಸಂಭ್ರಮೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಇಪ್ಪತೈದು ಸೇವಾಕಾರ್ಯಗಳಲ್ಲಿ ೭ ನೇ ಕಾರ್ಯಕ್ರಮ ಸಂಚಾರಿ ನಿಯಮ ಮಾಹಿತಿ ಕಾರ್ಯಾಗಾರವು ಪೆರುವಾಯಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ವಿಟ್ಲ ಪೊಲೀಸ್ ಠಾಣಾ ಎಸ್.ಐ. ಸಂದೀಪ್ ಶೆಟ್ಟಿ ಸಂಚಾರಿ ನಿಯಮಗಳ ಕುರಿತು ಮಾಹಿತಿ ನೀಡಿದರು. ಬೆಳ್ಳಿಹಬ್ಬ ಸಂಭ್ರಮೋತ್ಸವ ಸಮಿತಿಯ ಅಧ್ಯಕ್ಷ ಡಾ.ಗೀತಪ್ರಕಾಶ್, ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಪುಾಜಾರಿ, ಉಪಾಧ್ಯಕ್ಷೆ ನೆಫಿಸಾ, ಬ್ರಹ್ಮಶ್ರಿ ಸಹಕಾರಿಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಶ್ರೀಧರ ಬಾಳೆಕಲ್ಲು, ಸಂಜೀವ ಪೂಜಾರಿ ಯಂ. ಎಸ್. ರಾಜೇಶ್ ವಿಟ್ಲ, ಲಕ್ಷ್ಮಣಪೂಜಾರಿ, ಚಂದ್ರಹಾಸ ಸುವಣ೯,ರಾಜೇಂದ್ರ ರೈ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.