ಪುತ್ತೂರು: ಕಟ್ಟತ್ತಾರಿನ ಅನಿವಾಸಿಗರ ಸಂಘಟನೆ ಸಮಸ್ತ ಗಲ್ಫ್ ಬ್ರದರ್ಸ್ನ ವಾರ್ಷಿಕ ಮಹಾಸಭೆ ಝುಬೈರ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಉಮ್ಮರ್ ಮುಸ್ಲಿಯಾರ್ ನಂಜೆ ದುವಾ ನೆರವೇರಿಸಿ ಸಭೆ ಉದ್ಘಾಟಿಸಿದರು.
ಶಮೀರ್ ಫೈಝಿ ಚುಣಾವಣಾಧಿಕಾರಿಯಾಗಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಝುಬೈರ್ ಹಾಜಿ ಮಾತನಾಡಿ ಸಂಘಟನೆ ಮೂಲಕ ಹಲವಾರು ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಮುಂದಕ್ಕೂ ಬಡವರ ಪರವಾದ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದು ಹೇಳಿದರು.
ಸಮಸ್ತ ಗಲ್ಫ್ ಬ್ರದರ್ಸ್ ಕಟ್ಟತ್ತಾರು ಸಮಿತಿಯ 2022-23ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಝುಬೈರ್ ಹಾಜಿ (ಒಮಾನ್), ಅಧ್ಯಕ್ಷರಾಗಿ ಶರೀಫ್ ಮುಗುಳಿ(ಸೌದಿ ಅರೇಬಿಯಾ) ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಕೆ.ಎ ಕಟ್ಟತ್ತಾರು, ಕೋಶಾಧಿಕಾರಿಯಾಗಿ ರೌಫ್ ಬಿ.ಎಸ್ (ಶಾರ್ಜಾ) ಉಪಾಧ್ಯಕ್ಷರಾಗಿ ಹನೀಫ್ ಬದ್ರಿಯಾ ಜೊತೆ ಕಾರ್ಯದರ್ಶಿಯಾಗಿ ಅಝೀಝ್ ಅಬುದಾಬಿ ಆಯ್ಕೆಯಾದರು. ವರ್ಕಿಂಗ್ ಸದಸ್ಯರಾಗಿ ಜಾಬಿರ್ ದುಬೈ, ಇಬ್ರಾಹಿಂ ಬೆಂಗಳೂರ್ (ಕತ್ತರ್)ಜಾಸೀಂ ಕಣ್ಣೂರ್, ಮಜೀದ್ ಬಿ.ಎಂ, ಖಾದರ್ ದುಬೈ, ಮನ್ಸೂರ್ ಅಬುದಾಬಿ, ನವಾಝ್ ದುಬೈ ಆಯ್ಕೆಯಾದರು. ಖಾದರ್ ದುಬೈ ವರದಿ ವಾಚಿಸಿದರು. ನವಾಝ್ ದುಬೈ ಸ್ವಾಗತಿಸಿದರು.