ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರು ಇದರಲ್ಲಿ ತೆರವುಗೊಂಡಿದ್ದ ಎರಡು ನಿರ್ದೇಶಕರ ಸ್ಥಾನಕ್ಕೆ ಕೋ ಅಪ್ಟ್ ಮೂಲಕ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಪುಟ್ಟಣ್ಣ ಗೌಡ ಮುಗರಂಜ ಮತ್ತು ಪೂರ್ಣಿಮಾ ಬೆದ್ರಾಜೆರವರು ಆಯ್ಕೆಯಾಗಿದ್ದಾರೆ. ಕರ್ನಾಟಕ ಸಹಕಾರ ಸಂಘಗಳ ಅಧಿನಯಮ ೧೯೫೯ರ ಕಲಂ ೨೯ಇ ಪ್ರಕಾರ ಆಡಳಿತ ಮಂಡಳಿಯ ಮೂಲ ಪದಾವಧಿಯು ಅರ್ಧಕ್ಕಿಂತ ಕಡಿಮೆ ಇದ್ದಲ್ಲಿ ಕೋ ಅಪ್ಟ್ ಭರ್ತಿ ಮೂಲಕ ಅವಕಾಶವಿದ್ದು, ಅದರಂತೆ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಕೋ ಅಪ್ಟ್ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸಂಘದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷರಾದ ಆನಂದ ಗೌಡ ಮೇಲ್ಮನೆ, ಉಪಾಧ್ಯಕ್ಷರಾದ ಮುರಳೀಧರ ಪುಣ್ಚತ್ತಾರು, ನಿರ್ದೇಶಕರಾದ ಅನಂತಕುಮಾರ್ ಬೈಲಂಗಡಿ, ಹರೀಶ್ ಅಂಬುಲ, ವಿಶ್ವನಾಥ ಗೌಡ ಮರಕ್ಕಡ, ವಿಶ್ವನಾಥ ಕೂಡಿಗೆ, ಜಯರಾಮ ಕೆಳಗಿನಕೇರಿ, ಕಮಲ ಮುದುವ, ರತ್ನಾವತಿ ಮುದುವ, ರಮೇಶ್ ಉಪ್ಪಡ್ಕ, ವಲಯ ಮೇಲ್ವೀಚಾರಕ ವಸಂತ ಎಸ್, ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಧಿಕಾರಿ ಅಶೋಕ್ ಗೌಡ ಸ್ವಾಗತಿಸಿ, ವಂದಿಸಿದರು.