ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ವನಮೋತ್ಸವ

0

ನೆಲ್ಯಾಡಿ: ಶ್ರೀ ರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ ಇಲ್ಲಿ ವಿದ್ಯಾಲಯ ಮತ್ತು ಸೀನಿಯರ್ ಛೇಂಬರ್ ನೆಲ್ಯಾಡಿ ಇದರ ಸಹಯೋಗದೊಂದಿಗೆ ವನಮಹೋತ್ಸ ಜು.14ರಂದು ಆಚರಿಸಲಾಯಿತು.

 

ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ವ್ಯಾಪ್ತಿಯ ಅರಣ್ಯರಕ್ಷಕ ದೇವಿಪ್ರಸಾದ್‌ರವರು ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಣೆಯ ಕುರಿತು, ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯಲ್ಲಿ ಜನರ ನಿರ್ಲಕ್ಷ್ಯ ಕುರಿತು ಮಾತನಾಡಿ, ವನಮಹೋತ್ಸವವು ಪ್ರದರ್ಶನಕ್ಕಾಗಿ ಮಾತ್ರ ಆಚರಿಸಲ್ಪಡದೆ ಅದರ ನಿಜವಾದ ಉದ್ದೇಶವು ಈಡೇರಲ್ಪಡಬೇಕು ಎಂದು ಹೇಳಿದರು. ನೆಲ್ಯಾಡಿಯ ವೈದ್ಯ ಡಾ.ಸದಾನಂದ ಕುಂದರ್, ನಿವೃತ್ತ ಮುಖ್ಯಶಿಕ್ಷಕ ವೆಂಕಟ್ರಮಣ ಆರ್.,ರವರು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿದರು. ಆಡಳಿತ ಸಮಿತಿಯ ಸದಸ್ಯ ರವಿಚಂದ್ರ ಹೊಸವಕ್ಲು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಗಣೇಶ್ ವಾಗ್ಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾತಿ ಮಾತಾಜಿ ವಂದಿಸಿದರು. ಸೂರ್ಯ ಮಾತಾಜಿ ನಿರೂಪಿಸಿದರು.

LEAVE A REPLY

Please enter your comment!
Please enter your name here