ಶಾಂತಿಮೊಗರು: ಗಣೇಶಚತುರ್ಥಿ ಹಬ್ಬದ ಪೂರ್ವಭಾವಿ ಸಭೆ

0

 

ಕಾಣಿಯೂರು: ಶಾಂತಿಮೊಗರು ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ ಅ 31ರಂದು ನಡೆಯಲಿರುವ 20 ನೇ ವರ್ಷದ ಸಾರ್ವಜನಿಕ ಗಣೇಶಚತುರ್ಥಿ ಹಬ್ಬದ ಪೂರ್ವಭಾವಿ ಸಭೆಯು ಜು 17ರಂದು ನಡೆಯಿತು. ಅ 18ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಊರವರಿಗೆ ಆಟೋಟ ಸ್ಪರ್ಧೆ ನಡೆಯಲಿದೆ. ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ರಾಜ್ ದೀಪಕ್ ಜೈನ್ ಕುದ್ಮಾರು ಗುತ್ತು. ಉಪಾಧ್ಯಕ್ಷ ಉಮೇಶ್ ಕೆರೆನಾರು, ಕಾರ್ಯದರ್ಶಿ ಚೆನ್ನಪ್ಪ ಗೌಡ ನೂಜಿ, ಕೋಶಾಧಿಕಾರಿ ದೇವರಾಜ್ ನೂಜಿ, ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಹೊಸೋಕ್ಲು , ಕಾರ್ಯದರ್ಶಿ ರಾಮಚಂದ್ರ ಅನ್ಯಾಡಿ, ಬೆಳಂದೂರು ಗ್ರಾ. ಪಂ. ಅಧ್ಯಕ್ಷರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ಗ್ರಾ.ಪಂ.ಸದಸ್ಯ ಪ್ರವೀಣ್ ಕೆರೆನಾರು, ಮೇದಪ್ಪ ಗೌಡ ಕುವೆತ್ತೋಡಿ, ಬಾಲಕೃಷ್ಣ ನೂಜಿ, ಲೋಕೇಶ್ ಬಿ. ಎನ್, ಪುನೀತ್ ಹೊಸೋಕ್ಲು, ಪದ್ಮನಾಭ ಕೆರೆನಾರು, ಅಂಚನ್ ಡೆಬ್ಬೆಲಿ, ಚೇತನ್ ಹೋಸೋಕ್ಲು, ಸಂತೋಷ್ ಕಡಮ್ಮಾಜೆ, ರೋಹಿತ್ ಖಂಡಿಗ, ಯೋಗೀಶ್ ಬರೆಪ್ಪಾಡಿ, ಹರೀಶ್ ಕೆರೇನಾರು, ಪ್ರೀತಮ್, ರತನ್ ಡೆಬ್ಬೆಲಿ,ಬಾಲಚಂದ್ರ ಕೆರೇನಾರು ಮತ್ತಿತರರು ಉಪಸ್ಥಿತರು.

LEAVE A REPLY

Please enter your comment!
Please enter your name here