ಮಣ್ಣಾಪು ಮಣ್ಣ ಮಾಯೊದ ಕರಿಗಂಧ ತುಳು ಭಕ್ತಿಗೀತೆ ಬಿಡುಗಡೆ, ಸನ್ಮಾನ

0

 

ಪುತ್ತೂರು : ಮಣ್ಣಾಪು ಕೊರಗಜ್ಜ ಕ್ಷೇತ್ರಕ್ಕ ಸಂಬಂಧಿಸಿದ ಮಾಯೊದ ಕರಿಗಂಧ ತುಳು ಭಕ್ತಿಗೀತೆಯ ಧ್ವನಿಸುರುಳಿ ಜು.16ರಂದು ಬಿಡುಗಡೆಗೊಂಡಿದ್ದು ಇದರ ಹಿನ್ನಲೆ ಗಾಯಕರಾದ ಚೈತ್ರಾ ಗಾಣಿಗ ಕಲ್ಲಡ್ಕ, ಪ್ರವೀಣ್ ಕಕ್ಕೆಬೆಟ್ಟು ಮತ್ತು ಸಾಹಿತ್ಯ ಬರೆದ ಪ್ರಶಾಂತ್ ಪುತ್ತೂರು ರವರನ್ನು ಜೈ ಶ್ರೀರಾಮ್ ಫ್ರೆಂಡ್ಸ್ ಬಳಗ ತಂಡದಿಂದ ಮಣ್ಣಾಪು ಕ್ಷೇತ್ರದಲ್ಲಿ ಸನ್ಮಾನ ಮಾಡಲಾಯಿತು. ಶ್ರೀನಿಧಿ, ಹಾಗೂ ಪ್ರಖ್ಯಾತ್ ಪೂಜಾರಿ ಹಿಂದಾರು, ಮಣ್ಣಾಪು ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಜೈ ಶ್ರೀರಾಮ್ ಬಳಗ ತಂಡದಿಂದ ಸನ್ಮಾನ ನೆರವೇರಿಸಲಾಯಿತು. ವಿಶ್ವನಾಥ್ ಮಣ್ಣಾಪು, ಜೈ ಶ್ರೀರಾಮ್ ಬಳಗದ ಜಯರಾಮ್ ಗೌಡ ಬೊಳ್ಳಗುಡ್ಡೆ, ನಾಗೇಶ್ ಗೌಡ, ಭರತ್ ಗೌಡ, ರವಿಚಂದ್ರ ಉದಯಗಿರಿ, ಧನುಷ್ ಬೊಳ್ಳಗುಡ್ಡೆ, ಸತೀಶ್ ಪೂಜಾರಿ ಹಿಂದಾರು, ಹರೀಶ್ ಪೂಜಾರಿ ಹಿಂದಾರು, ಚೆನ್ನಪ್ಪ ಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here