ಮಂಗಳೂರು:ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ನಗರದ ಮಾಪ್ಸ್ ಕಾಲೇಜಿನ ಬಿ.ಕಾಂ.ಇಂಟೆಗ್ರೇಟೆಡ್ ವಿದ್ಯಾರ್ಥಿಗಳಾದ ಕೆ.ವಿನಾಯಕ್ ಪೈ, ಪೃಥ್ವಿ ಪಿ ಶೆಟ್ಟಿ,ಮಶಾದ್ ರುಕ್ಕುದ್ದೀನ್, ಸುದೇಶ್ ಎಸ್ ಮಲ್ಯ ಹಾಗೂ ಸೊನಾಲಿ ಎಸ್ ಕಾಮತ್ ಉತ್ತಿರ್ಣರಾಗಿ ಸಾಧನೆ ಮಾಡಿರುತ್ತಾರೆ.
ಕೆ.ವಿನಾಯಕ್ ಪೈಯವರು ಲೆಕ್ಕಪರಿಶೋಧಕ ಪ್ರಶಾಂತ್ ಪೈ ಅವರ ಮಾರ್ಗದರ್ಶನದಲ್ಲಿ ಆರ್ಟಿಕಲ್ಶಿಪ್ ಮುಗಿಸಿರುತ್ತಾರೆ.ಇವರು ಪ್ರಶಾಂತ್ ಪೈ-ಅನುರಾಧ ಜಿ.ರವರ ಪುತ್ರ.ಪೃಥ್ವಿ ಪಿ ಶೆಟ್ಟಿಯವರು ಲೆಕ್ಕಪರಿಶೋಧಕ ಪ್ರಶಾಂತ್ ಪೈ ಅವರ ಮಾರ್ಗದರ್ಶನದಲ್ಲಿ ಆರ್ಟಿಕಲ್ ಶಿಪ್ ಮುಗಿಸಿರುತ್ತಾರೆ.ಇವರು ಪ್ರಕಾಶ್ ಶೆಟ್ಟಿ-ಮಲ್ಲಿಕಾ ಶೆಟ್ಟಿ ದಂಪತಿ ಪುತ್ರಿ.ಮಶಾದ್ ರುಕ್ಕುದ್ದೀನ್ರವರು ಲೆಕ್ಕಪರಿಶೋಧಕ ನವೀನ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಆರ್ಟಿಕಲ್ಶಿಪ್ ಮುಗಿಸಿರುತ್ತಾರೆ.ಇವರು ಮುಜಿಬುರ್ ರೆಹಮಾನ್-ಫೈಝಾ ದಂಪತಿ ಪುತ್ರ. ಸುದೇಶ್ ಎಸ್ ಮಲ್ಯ ಇವರು ಲೆಕ್ಕಪರಿಶೋಧಕ ಬಿ.ಎನ್.ಸುರೆಂದ್ರ ಭಟ್ ಮತ್ತು ಗಿರಿಧರ ಕಾಮತ್ ಅವರ ಮಾರ್ಗದರ್ಶನದಲ್ಲಿ ಆರ್ಟಿಕಲ್ಶಿಪ್ ಮುಗಿಸಿರುತ್ತಾರೆ.ಇವರು ಸುಖಾನಂದ ಮಲ್ಯ-ಸ್ನೇಹ ಮಲ್ಯ ದಂಪತಿ ಪುತ್ರ.ಸೊನಾಲಿ ಎಸ್ ಕಾಮತ್ ಇವರು ಲೆಕ್ಕಪರಿಶೋಧಕ ರಾಮಚಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಅರ್ಟಿಕಲ್ಶಿಪ್ ಮುಗಿಸಿರುತ್ತಾರೆ.ಇವರು ಶ್ರೀಕಾಂತ್-ಸುನಿತಾ ಕಾಮತ್ ದಂಪತಿಯ ಪುತ್ರಿ.