ಹಿರೇಬಂಡಾಡಿ ಒಕ್ಕಲಿಗ ಸ್ವಸಹಾಯ ಸಂಘದ ಒಕ್ಕೂಟ; ಅಧ್ಯಕ್ಷ : ವಿನೋದ್ ಗೌಡ, ಉಪಾಧ್ಯಕ್ಷ :ಸುರೇಶ್ ಗೌಡ, ಪ್ರ.ಕಾರ್ಯದರ್ಶಿ: ಭಾರತಿ, ಜೊತೆ ಕಾರ್ಯದರ್ಶಿ: ಪ್ರಿಯ, ಕೋಶಾಧಿಕಾರಿ: ಪ್ರೇಮ

0

ಪುತ್ತೂರು: ಹಿರೇಬಂಡಾಡಿ ಬಾಲಕೃಷ್ಣ ಮಂಟಂದೂರುರವರ ನಿವಾಸದಲ್ಲಿ ಹಿರೇಬಂಡಾಡಿ ಒಕ್ಕಲಿಗ ಸ್ವಸಹಾಯ ಒಕ್ಕೂಟ ರಚನೆ ಮಾಡಲಾಯಿತು. ಒಕ್ಕೂಟದ ಅಧ್ಯಕ್ಷರಾಗಿ ವಿನೋದ್ ಗೌಡ, ಉಪಾಧ್ಯಕ್ಷರಾಗಿ ಸುರೇಶ್ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಭಾರತಿ, ಜೊತೆ ಕಾರ್ಯದರ್ಶಿಯಾಗಿ ಪ್ರಿಯ, ಕೋಶಾಧಿಕಾರಿಯಾಗಿ ಪ್ರೇಮ ಆಯ್ಕೆಯಾದರು. ಗ್ರಾಮ ಸಮಿತಿ ಅಧ್ಯಕ್ಷ ಸುಧಾಕರ್ ಗೌಡ, ಮಹಿಳಾ ಸಂಘದ ಅಧ್ಯಕ್ಷೆ ಸೌಮ್ಯ, ಯುವ ಸಂಘ ಅಧ್ಯಕ್ಷ ಗುರುರಾಜ್ ಗೌಡ, ಮತ್ತು ಊರ ಗೌಡರಾದ ಯಾನಪ್ಪ ಗೌಡ ಬಂಡಾಡಿ, ಸೇಸಪ್ಪ ಗೌಡ ಹೊಸಮನೆ, ಜನಾರ್ದನ ಗೌಡ, ಮೋನಪ್ಪ ಗೌಡ ಕುಬಲ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ, ಮೇಲ್ವಿಚಾರಕಿ ಸುಮಲತಾ, ಪ್ರೇರಕ ತಾರಾನಾಥ ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here