- ಗೌರವಾಧ್ಯಕ್ಷ: ಕೃಷ್ಣಪ್ಪ ಗೌಡ, ಅಧ್ಯಕ್ಷ: ಜಯತ್ ಕೆಮ್ಮಾರ, ಕಾರ್ಯದರ್ಶಿ: ವಿಜೇಶ್ ರೈ, ಕೋಶಾಧಿಕಾರಿ: ಹರೀಶ್ ಅಮಳ
ಪುತ್ತೂರು: ಕೊಳ್ತಿಗೆ ಹಳೆ ವಿದ್ಯಾರ್ಥಿ ಸಂಘದ ಸಭೆಯು ಕೊಳ್ತಿಗೆ ಶಾಲಾ ಸಭಾಂಗಣದಲ್ಲಿ ಜು.17 ರಂದು ನಡೆಯಿತು. ಹಳೆ ವಿದ್ಯಾರ್ಥಿ ಸಂಘದ 2022-23ನೇ ಸಾಲಿನ ನೂತನ ಸಮಿತಿಯನ್ನು ಸಂಘದ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ ಬಾಯಂಬಾಡಿ, ಅಧ್ಯಕ್ಷರಾಗಿ ಜಯತ್ ಕೆಮ್ಮಾರ, ಕಾರ್ಯದರ್ಶಿಯಾಗಿ ವಿಜೇಶ್ ರೈ ಕೆಳಗಿನಮನೆ, ಕೋಶಾಧಿಕಾರಿಯಾಗಿ ಹರೀಶ್ ಅಮಳ ಹಾಗೂ ಉಪಾಧ್ಯಕ್ಷರಾಗಿ ಸಂತೋಷ್ ಬಾಯಂಬಾಡಿ, ಜೊತೆ ಕಾರ್ಯದರ್ಶಿಯಾಗಿ ವಿನೋದ್ ರೈ ಕೆಳಗಿನಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಶೋಭಿತ್ ಕೆಮ್ಮಾರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೀರ್ತನ್ ಬಾಯಂಬಾಡಿರವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಹಿರಿಯರು, ಸಂಘದ ಸದಸ್ಯರು ಉಪಸ್ಥಿತರಿದ್ದರು. ವಿಜೇಶ್ ರೈ ಸ್ವಾಗತಿಸಿ, ವಂದಿಸಿದರು.