ರಾಮಕುಂಜ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಕೊಯಿಲ ಗ್ರಾಮದ ಪಲ್ಲಡ್ಕ ಸೋಮನಾಥ ಎಂಬವವರಿಗೆ ಸೇರಿದ ದನದ ಹಟ್ಟಿಯೊಂದು ಜು.17ರಂದು ಕುಸಿತಗೊಂಡಿದೆ. ಮಳೆಯಿಂದಾಗಿ ಹಟ್ಟಿಯ ಛಾವಣಿ ಸಂಪೂರ್ಣ ನಾಶವಾಗಿದೆ. ಗೋಡೆಗೆ ಹಾನಿಯಾಗಿದೆ. ಪವಾಡ ಸದೃಶ್ಯವಾಗಿ ದನಗಳು ಪ್ರಾಣಾಪಯದಿಂದ ಪಾರಾಗಿವೆ. ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.