ಕಡಬ: ನಿರಂತರ ಮಳೆಗೆ ಕೊಯಿಲ ಗ್ರಾಮದ ಪುಣ್ಕೆತ್ತಡಿ ವಿನೋದ ರೈ ಎಂಬವರ ಮನೆ ಹಿಂಭಾಗದ ತಡೆಗೋಡೆ ಕುಸಿದು ಬಿದ್ದು ಅಪಾರ ನಷ್ಟ ಉಂಟಾಗಿದೆ.
ತಡೆಗೋಡೆಯೊಂದಿಗೆ ಮಣ್ಣು ಕುಸಿದು ಮನೆಯ ಗೋಡೆಗೆ ಹಾನಿಯಾಗಿದೆ. ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್, ಉಪಾಧ್ಯಕ್ಷೆ ಕಮಲಾಕ್ಷಿ ಪಾಜಳಿಕೆ, ಸದಸ್ಯ ಚಂದ್ರಶೇಖರ, ಗ್ರಾಮ ಸಹಾಯ ಜಯಂತರವರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.