ಸವಣೂರು : ಪೆರುವಾಜೆ ಗ್ರಾಮದ ಕನ್ನೆಜಾಲು ನಿವಾಸಿ, ಸುಳ್ಯದ ಜ್ಯೋತಿ ಸಂಸ್ಥೆಯ ಮಾಲಕ ಜಗನ್ನಾಥ ರೈ ಕನ್ನೆಜಾಲು ಜು.18 ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಜೀವನ್ ರೈ ಕನ್ನೆಜಾಲು, ಪುತ್ರಿ ಜ್ಯೋತಿ ರೈ ಅವರನ್ನು ಅಗಲಿದ್ದಾರೆ.
ಜಗನ್ನಾಥ ರೈ ಅವರು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.