ಕಡಬ: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಸುಸಂದರ್ಭದಲ್ಲಿ ಪ್ರತಿ ಮನೆಯಲ್ಲಿ ತಿರಂಗ ಹಾರಿಸುವ ಬಗ್ಗೆ ಮತ್ತು ಅಮೃತ ಸರೋವರ ಯೋಜನೆಯಡಿ ಆಯ್ಕೆಯಾದ ಹಳೆಸ್ಟೇಷನ್ ಬಳಿ ಸ್ವಾತಂತ್ರ್ಯೋತ್ಸವ ದಿನದಂದು ಧ್ವಜಾರೋಹಣ ಮಾಡುವ ಬಗ್ಗೆ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗ್ರಾಮಸ್ಥರೊಂದಿಗೆ ಪೂರ್ವಭಾವಿ ಸಭೆಯು ಕುಟ್ರುಪಾಡಿ ಗ್ರಾಮ ಪಂಚಾಯತ್ನಲ್ಲಿ ನಡೆಯಿತು.
ಸಭೆಯು ಗ್ರಾ.ಪಂ. ಅಧ್ಯಕ್ಷ ಮೋನಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಹಳೆಸ್ಟೇಷನ್ ಬಳಿ ಇರುವ ಕೆರೆ ಅಭಿವೃದ್ದಿ ಸಮಿತಿ ರಚಿಸಲಾಯಿತು. ತಾಲೂಕು ಐ.ಇ.ಸಿ ಸಂಯೋಜಕರಾದ ಭರತ್ ರಾಜ್ ಉದ್ಯೋಗ ಖಾತರಿ ತಾಂತ್ರಿಕ ಸಹಾಯಕರಾದ ಮೋಹಿತ್ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಆನಂದ ಎ ಸ್ವಾಗತಿಸಿ ವಂದಿಸಿದರು.